Monday, June 30, 2025
spot_imgspot_img
spot_imgspot_img

(ಏ.12-13) ಅನಂತಾಡಿ ಪಂಡಿತ ಕುಟುಂಬಸ್ಥರ ಮೂಲ ತರವಾಡು ದೈವಸ್ಥಾನ ಬಾಕಿಲದಲ್ಲಿ ಶ್ರೀ ಬಿಲ್ಲರಾಯ, ಧರ್ಮದೈವ ಶ್ರೀ ಅಣ್ಣಪ್ಪ ಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವ

- Advertisement -
- Advertisement -

ಅನಂತಾಡಿ: ಬಾಕಿಲ ತರವಾಡು ಮನೆಯ ಪಂಡಿತ ಕುಟುಂಬಸ್ಥರ ಮೂಲ ತರವಾಡು ದೈವಸ್ಥಾನದಲ್ಲಿ ಶ್ರೀ ಬಿಲ್ಲರಾಯ, ಧರ್ಮದೈವ ಶ್ರೀ ಅಣ್ಣಪ್ಪ ಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಏ.12-4-2025ನೇ ಶನಿವಾರ ಮತ್ತು 13-4-2025ನೇ ಆದಿತ್ಯವಾರ ನಡೆಯಲಿದೆ.

ದಿನಾಂಕ: 12-4-2025ನೇ ಶನಿವಾರ ಬೆಳಿಗ್ಗೆ 5.00ಕ್ಕೆ ಗಣಪತಿ ಹೋಮ ಬಳಿಕ 7.00ಕ್ಕೆ ತರವಾಡು ಮೂಲನಾಗಬನದಲ್ಲಿ ವಾರ್ಷಿಕ ನಾಗ ತಂಬಿಲ ಸೇವೆ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಮೂಲ ತರವಾಡು ದೈವಸ್ಥಾನದಲ್ಲಿ ದೇವರಿಗೆ ಮುಡಿಪು ಕಟ್ಟುವುದು. ಸಂಜೆ 6.00ಕ್ಕೆ ದೈವಗಳ ಭಂಡಾರ ತೆಗೆಯುವುದು. ರಾತ್ರಿ 8.00ಕ್ಕೆ ಬಿಲ್ಲರಾಯ ದೈವದ ನೇಮ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಬಳಿಕ ರಾತ್ರಿ 10.00ಕ್ಕೆ : ಜುಮಾದಿ-ಬಂಟ ನೇಮ ನಡೆಯಲಿದೆ. ರಾತ್ರಿ 12.00ಕ್ಕೆ ಕಲ್ಲುರ್ಟಿ ಹಾಗೂ ಧರ್ಮದೈವ ಶ್ರೀ ಅಣ್ಣಪ್ಪ ಸ್ವಾಮಿ ದೈವದ ನೇಮ ನಡೆಯಲಿದೆ.

ಬೆಳಿಗ್ಗೆ 4.00ಕ್ಕೆ ಮನಿಪಾನ ಪಂಜುರ್ಲಿ ದೈವದ ನೇಮ ಬಳಿಕ ಬೆಳಿಗ್ಗೆ 5.00ಕ್ಕೆ ಸನ್ನಿ ಗುಳಿಗ ದೈವದ ನೇಮ ನಡೆಯಲಿದೆ. ಬೆಳಿಗ್ಗೆ 7.00ಕ್ಕೆ : ಸ್ವಾಮಿ ಕೊರಗಜ್ಜ ದೈವದ ನೇಮ ನಡೆದು ಬಳಿಕ ಸಂಜೆ 6.00ಕ್ಕೆ ದೈವಗಳಿಗೆ ಕುರಿತಂಬಿಲ ನಡೆಯಲಿದೆ.

- Advertisement -

Related news

error: Content is protected !!