Saturday, June 28, 2025
spot_imgspot_img
spot_imgspot_img

ಜಿಲ್ಲೆಯಾದ್ಯಂತ ಕೆಂಪು ಕಲ್ಲು ಸಾಗಾಟ ಅನಧಿಕೃತ ಬಂದ್‌ನಿಂದ ಕಾರ್ಮಿಕರ ಬದುಕು ದಿಕ್ಕು ಪಾಲು..!ಅನಧಿಕೃತ ಬಂದ್‌ ಹೀಗೆ ಮುಂದುವರೆದರೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು: ಅರುಣ್‌ ವಿಟ್ಲ..!

- Advertisement -
- Advertisement -

ದ ಕ ಜಿಲ್ಲೆ ಅಂದರೆ ವ್ಯವಹಾರಿಕ ಜಿಲ್ಲೆ.. ಜೀವನಕ್ಕಾಗಿ ಜನರು ವಿವಿಧ ರೀತಿಯ ಕೆಲಸ ಕಾರ್ಯಗಳಲ್ಲಿ ದಿನನಿತ್ಯ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಜಿಲ್ಲೆಯ ಕೂಲಿ ಕಾರ್ಮಿಕರ ಪಾಲಿಗೆ ಕೆಂಪು ಕಲ್ಲು ಸಾಗಾಟ ಬಂದ್‌ ಇಂದು ಬಹುದೊಡ್ಡ ಪರಿಣಾಮ ಬಿದ್ದಿದೆ. ಕೆಂಪು ಕಲ್ಲು ಸಾಗಾಟ ಬಂದ್‌ನಿಂದಾಗಿ ಹಲವು ಕೂಲಿ ಕಾರ್ಮಿಕರ ಜೀವನದ ತುತ್ತಿಗೆ ಆಪತ್ತು ಎದುರಾಗಿದೆ.

ಕೆಂಪು ಕಲ್ಲು ಕ್ವಾರಿಯಲ್ಲಿ ವಿಶಾಲ ರೀತಿಯ ಹಲವು ಕೆಲಸ ಕಾರ್ಯಗಳು ನಡೆಯುತ್ತದೆ. ಕ್ವಾರಿಯಿಂದ ಮಿಷನ್‌ ಮೂಲಕ ಕೆಂಪು ಕಲ್ಲುಗಳನ್ನು ಕಟ್‌ ಮಾಡುವ ಕಾರ್ಮಿಕರು ಒಂದೆಡೆಯಾದರೆ, ಕಟ್‌ ಮಾಡಿದ ಕಲ್ಲುಗಳನ್ನು ಒಂದೆಡೆ ಭದ್ರವಾಗಿ ಮೇಲಕ್ಕೆತ್ತುವ ಕಾರ್ಮಿಕರು ಒಂದೆಡೆ. ಕಲ್ಲುಗಳನ್ನು ಶೇಖರಿಸಿಡುವವರು ಇನ್ನೊಂದೆಡೆಯಾದರೆ, ಲಾರಿಗಳಿಗೆ ಲೋಡ್‌ಮಾಡುವವ ಕಾರ್ಮಿಕರ ಗುಂಪೇ ಬೇರೆ, ಲೋಡ್‌ ಮಾಡಿದ ಕಲ್ಲುಗಳನ್ನು ಸಾಗಿಸುವ ಲಾರಿಚಾಲಕರು ಒಂದೆಡೆಯಾದರೆ.. ಅನ್ಲೋಡ್‌ ಮಾಡಲು ಒಂದಿಷ್ಟು ಹೆಲ್ಪರ್‌ಗಳು.. ಸ್ವಾ ಉದ್ಯೋಗಕ್ಕಾಗಿ ಕೆಂಪು ಕಲ್ಲು ಸಾಗಾಟಕ್ಕೆ ಬ್ಯಾಂಕ್ ಗಳಿಂದ ಸಾಲ ಮಾಡಿ ಲಾರಿ ಖರೀದಿಸಿ ಅದರಲ್ಲಿ ದುಡಿಯುವ ಲಾರಿ ಓನರ್‌ಗಳು, ಚಾಲಕರು..! ನೋಡಿ ಒಂದು ಕೆಂಪು ಪಾಯ ಎಷ್ಟು ಜನರ ಬಾಳಿಗೆ ವೃತ್ತಿಯ ಮೂಲಕ ಬೆಳಕಾಗಿದೆ ಎಂದು. ಆದರೆ ಗಂಭೀರವಾಗಿ ಯೋಚಿಸಬೇಕಾದ ವಿಷಯ ಏನು ಗೊತ್ತಾ.. ಇಂದು ಕೆಂಪು ಕಲ್ಲು ಸಾಗಾಟ ಬಂದ್‌ನಿಂದಾಗಿ ಇದೇ ವೃತ್ತಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಇಷ್ಟು ಜನರ ಬದುಕು ಬೀದಿಗೆ ಬಂದು ನಿಂತಿದೆ. ಇವರ ಗೋಳು ಕೇಳುವವರಾರಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ಕೈಯಲ್ಲಿ ಕಾಸಿಲ್ಲದೆ ಖಾಲಿ ಜೇಬಿನಲ್ಲಿ ಕುಳಿತ ಕಾರ್ಮಿಕರ ಪಾಡು ಒಂದೆಡೆಯಾದರೆ, ಪ್ರತೀ ರಾಜಕಾರಣಿಗಳ ಮನೆಗೆ ಸರ್ಕಾರಿ ಕಟ್ಟಡಗಳಿಗೆ, ದೇವಸ್ಥಾನ, ಚರ್ಚ್, ಮಸೀದಿಗೆ ಹಾಗೂ ಸಾರ್ವಜನಿಕ ಬಡ ಕುಟುಂಬದವರಿಗೂ ಒಂದು ಮನೆ ನಿರ್ಮಿಸಲು ಬೇಕಾಗಿರುವ ಅಗತ್ಯ ವಸ್ತು ಕೆಂಪು ಕಲ್ಲು. ಮನೆಕಟ್ಟುವ ಮೇಸ್ತ್ರಿಗಳು ಹೆಲ್ಪರುಗಳು ಸೆಂಟ್ರಿಂಗ್, ಪೈಂಟಿಂಗ್, ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25000 ರಿಂದ 30000 ಸಾವಿರ ಕಾರ್ಮಿಕರಿಗೆ ಕೆಲಸವಿಲ್ಲದೆ ಬೀದಿಪಾಲು ಆಗಿದ್ದಾರೆ. ಮನೆ ನಿರ್ಮಾಣ ಕಾರ್ಯಕ್ಕೆ ಕೆಂಪು ಕಲ್ಲನ್ನೇ ಅವಲಂಬಿಸುವ ನಮ್ಮ ಜಿಲ್ಲೆಯಲ್ಲಿ ಸುಂದರ ಮನೆ ನಿರ್ಮಾಣ ಮಾಡಬೇಕು ಎಂದು ಕನಸು ಹೊತ್ತು ಮನೆ ನಿರ್ಮಾಣ ಕಾರ್ಯಕ್ಕೆ ಇಳಿದ ಜನರು ಇಂದು ಕೆಂಪು ಕಲ್ಲು ಇಲ್ಲದೆ ಅದೆಷ್ಟೋ ಮನೆ ನಿರ್ಮಾಣ ಕಾರ್ಯಗಳು ಅರ್ಧದಲ್ಲೇ ಮೊಟಕುಗೊಂಡಿವೆ. ಅಲ್ಲದೆ ಇದರಿಂದ ಮೋಟಾರ್ ಉದ್ದಿಮೆಗಳಿಗೆ, ಹೋಟೆಲ್ ಉದ್ದಿಮೆಗಳಿಗೆ, ಒಟ್ಟಾರೆ ಸರಪಳಿ ರೀತಿಯಲ್ಲಿ ವ್ಯವಹಾರ ನಡೆಯುತ್ತಿದ್ದ ನಮ್ಮ ಜಿಲ್ಲೆಯಲ್ಲಿ ಕೆಂಪು ಕಲ್ಲು ಸಾಗಟದ ಅನಧಿಕೃತ ಬಂದ್‌ನಿಂದಾಗಿ ಆರ್ಥಿಕ ಸ್ಥಿತಿ ಕುಂಠಿತಗೊಂಡಿದೆ. ಇವೆಲ್ಲದುದಕ್ಕೂ ಹೊಣೆ ಯಾರು? ಸರ್ಕಾರವೋ ಅಥವಾ ರಾಜಕೀಯ ವ್ಯವಸ್ಥೆಯೋ..? ಈ ಬಗ್ಗೆ ವಿಟ್ಲ ಪಟ್ಟಣ ಪಂಚಾಯತ್‌ ಸದಸ್ಯ ಅರುಣ್‌ ವಿಟ್ಲ ಮಾತನಾಡಿ ’ ಕೆಂಪು ಕಲ್ಲು ಸಾಗಾಟ ಅನಧಿಕೃತ ಬಂದ್‌ನಿಂದಾಗಿ ಇಂದು ಬಡ ಜನರ ಪಾಲಿಗೆ ಬಹುದೊಡ್ಡ ನಷ್ಟ ಉಂಟಾಗಿದೆ. ಜೀವನಕ್ಕಾಗಿ ಇದೇ ವೃತ್ತಿಯನ್ನು ನಂಬಿದ್ದ ಹಲವು ವರ್ಗದ ಜನರ ಬದುಕು ದಿಕ್ಕು ಪಾಲಾಗಿದೆ. ಕೇರಳ ಮತ್ತು ಕರ್ನಾಟಕಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹೆಚ್ಚಿನ ರಾಯಲ್ಟಿ ಇದೆ. ಆದರಿಂದ ಸರ್ಕಾರ ಕೆಂಪು ಕಲ್ಲು ಲೀಜ್ ಮಾಡುವ ಬಗ್ಗೆ ಸರಳೀಕರಣ ವ್ಯವಸ್ಥೆ ತರಲಿ. ಹೆಚ್ಚಾಗಿ ಎಲ್ಲಾ ಕೆಂಪು ಕಲ್ಲು ಕೋರೆಗಳು ಪರವಾನಿಗೆ ಸಹಿತ ವ್ಯವಹಾರ ನಡೆಸುತ್ತಿದ್ದು, ಪರವಾನಿಗೆ ಇಲ್ಲದ ಕ್ವಾರಿ ಗಳಿಗೆ ಪರವಾನಿಗೆ ಮಾಡಲು ಕಲಾವಕಾಶ ನೀಡಿ, ಕಲಾವಕಾಶಕ್ಕೂ ಮೀರಿ ಪರವಾನಿಗೆ ಇಲ್ಲದೆ ಕೆಂಪು ಕಲ್ಲು ಸಾಗಟ ನಡೆಸಿದರೆ ಅಂತಹ ಕ್ವಾರಿಗಳಿಗೆ ನಿರ್ಬಂಧ ಹೇರಿ ಕೆಂಪು ಕಲ್ಲುವನ್ನು ಬಂದ್ ಮಾಡಿ. ಸರ್ಕಾರಿ ಜಾಗಗಳಲ್ಲಿ ನಡೆಸುವ ಕ್ವಾರಿಗಳಿಗೆ ಸರ್ಕಾರ ಯಾವುದೇ ರೂಲ್ಸ್‌ಗಳನ್ನು ಜಾರಿಗೆ ತರಲಿ.ಆದರೆ ಕೆಂಪು ಕೋರೆ ನಡೆಸುವವರ ವಿರುದ್ಧ ಸರ್ಕಾರ ನಡೆಸುತ್ತಿರುವ ದಿನಕ್ಕೋಂದು ಕಾನೂನು, ದೌರ್ಜನ್ಯ ಇಷ್ಟು ಕಠಿಣ ಕಾನೂನು ರೂಲ್ಸ್ ಯಾಕೆ…..? ಕೆಂಪು ಕಲ್ಲಿನ ಹಿಂದೆ ಅದೆಷ್ಟು ಬಡ ಕುಟುಂಬದ ಪರಿಶ್ರಮ ಇದೆಯೆಂದು ಸರ್ಕಾರ ಒಮ್ಮೆ ಯೋಚಿಸಲಿ. ಮುಂದಿನ ದಿನಗಳಲ್ಲಿ ಅನಧಿಕೃತ ಬಂದ್‌ ಹೀಗೆ ಮುಂದುವರೆದರೆ ಎಲ್ಲಾ ಕಾರ್ಮಿಕ ವರ್ಗದವರನ್ನು ಒಟ್ಟುಗೂಡಿಸಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!