Monday, July 7, 2025
spot_imgspot_img
spot_imgspot_img

ವಿಟ್ಲ: ಮೇಗಿನಪೇಟೆ ಹೋಂಡಾ ಶೋರೂಂ ಮುಂಭಾಗದಲ್ಲಿ ’ದುರ್ಗಾಂಬಾ ಟ್ರೇಡರ್ಸ್’ ಶುಭಾರಂಭ

- Advertisement -
- Advertisement -

ವಿಟ್ಲ: ’ದುರ್ಗಾಂಬಾ ಟ್ರೇಡರ್ಸ್’ ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಮೇಗಿನಪೇಟೆ ಹೋಂಡಾ ಶೋರೂಂ ಮುಂಭಾಗದಲ್ಲಿ ಶುಭಾರಂಭಗೊಂಡಿತು. ಬೆಳಗ್ಗೆ ಗಣಹೋಮ ನಡೆಯಿತು.

ರಮೇಶ್‌ ವರಪ್ಪಾದೆ, ನಾಗೇಶ್‌ ಬಸವನಗುಡಿ, ಹಾಗೂ ಜಯಪ್ರಕಾಶ್‌ ವರಪ್ಪಾದೆ ಮಾಲಕತ್ವದ ’ದುರ್ಗಾಂಬಾ ಟ್ರೇಡರ್ಸ್’ ನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ವೇದಮೂರ್ತಿ ಕಮಲಾದೇವಿ ಅಸ್ರಣ್ಣರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಸೇರಿದಂತೆ ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.

‘ದುರ್ಗಾಂಬಾ ಟ್ರೇಡರ್ಸ್’ ನಲ್ಲಿ ತೆಂಗಿನಕಾಯಿ, ಕೊಬ್ಬರಿ, ಗೆರಟೆ, ಬಾಳೆಗೊನೆ, ಕೊಕ್ಕೊ, ಹಣ್ಣಡಿಕೆ, ಕರಿಮೆಣಸು ಇತ್ಯಾದಿಗಳನ್ನು ಅತ್ಯುತ್ತಮ ದರದೊಂದಿಗೆ ಖರೀದಿಸಲಾಗುವುದು. ಖರೀದಿಯ ವಸ್ತುಗಳನ್ನು ಪಿಕಪ್‌ ವಾಹನದ ಮೂಲಕ ನಿಮ್ಮ ಮನೆ ಬಾಗಿಲಿನಿಂದ ಅಂಗಡಿಗೆ ತರುವ ವ್ಯವಸ್ಥೆ ಇದೆ. ವಿಟ್ಲ ಹಾಗೂ ಆಸುಪಾಸಿನ ಕೃಷಿಕರು ’ದುರ್ಗಾಂಬಾ ಟ್ರೇಡರ್ಸ್’ ನ ಜೊತೆ ಸಹಕರಿಸುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9901504076, 9448870318, 9448545877
ಭೇಟಿ ನೀಡಿ:
ದುರ್ಗಾಂಬಾ ಟ್ರೇಡರ್ಸ್
ಮೇಗಿನಪೇಟೆ ಹೋಂಡಾ ಶೋರೂಂ ಬಳಿ
ವಿಟ್ಲ ಪುತ್ತೂರು ಮುಖ್ಯ ರಸ್ತೆ, ವಿಟ್ಲ

- Advertisement -

Related news

error: Content is protected !!