Tuesday, July 8, 2025
spot_imgspot_img
spot_imgspot_img

ಶಿವಮೊಗ್ಗ: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಗೆ ಥಳಿಸಿ ಹತ್ಯೆ, ʼದೆವ್ವ ಬಿಡಿಸಿದʼ ಮಹಿಳೆಯ ಬಂಧನ

- Advertisement -
- Advertisement -

ಶಿವಮೊಗ್ಗ : ದೆವ್ವ ಬಿಡಿಸುವುದಾಗಿ ಹೇಳಿ ಮಹಿಳೆಯೊಬ್ಬರನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಜಂಬರಗಟ್ಟೆಯಲ್ಲಿ ರವಿವಾರ ರಾತ್ರಿ ನಡೆದಿದೆ.

ಮೃತರನ್ನು ಹೊಸ ಜಂಬರಗಟ್ಟೆ ಗ್ರಾಮದ ನಿವಾಸಿ ಗೀತಮ್ಮ (45) ಎಂದು ಗುರುತಿಸಲಾಗಿದೆ.ರವಿವಾರ ರಾತ್ರಿ 9.30ಕ್ಕೆ ಹತ್ಯೆಗೊಳಗಾದ ಗೀತಮ್ಮನ ಮನೆಗೆ ಬಂದ ಆಶಾ ಎಂಬಾಕೆ, ಮಂಕಾಗಿದ್ದ ಗೀತಮ್ಮರಿಗೆ ದೆವ್ವ ಹಿಡಿದಿದೆ, ಅದನ್ನು ಬಿಡಿಸುವುದಾಗಿ ಗೀತಮ್ಮ ಅವರ ಮಗನ ಬಳಿ ಹೇಳಿದ್ದಾಳೆ. ಮಗ ಸಂಜಯ್ ಗೆ ತನ್ನ ತಾಯಿ ಲವಲವಿಕೆಯಿಂದ ಇದ್ದರೆ ಸಾಕು ಎಂದು ನಂಬಿ ಆಶಾಳ ಮಾತಿಗೆ ಒಪ್ಪಿಕೊಂಡು ದೆವ್ವ ಬಿಡಿಸಲು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಆಶಾ, ಗೀತಾಳ ಮೈಮೇಲೆ ಆತ್ಮವೊಂದು ಹೊಕ್ಕಿದೆ. ಪೂಜೆ ಮಾಡಿ ಆತ್ಮವನ್ನು ಹೊರ ಹಾಕುವುದಾಗಿ ಗೀತಮ್ಮನ ಮಗ ಸಂಜಯ್ ಗೆ ತಿಳಿಸಿದ್ದಳು.ಈ ವೇಳೆ ಗೀತಮ್ಮನ ಮನೆಯ ಮುಂಭಾಗದಲ್ಲಿ ಆಶಾ, ಪೂಜೆ ಮಾಡಿದ್ದಾಳೆ. ಪೂಜೆ ಮಾಡುತ್ತಿದ್ದಂತೆ ಗೀತಮ್ಮನ ಮೇಲೆ ದೆವ್ವ ಬಂದಿದೆ ಎಂದು ಗೀತಮ್ಮನ ತಲೆ ಮೇಲೆ ಕಲ್ಲು ಹೊರಿಸಿಕೊಂಡು ಮನೆಯಿಂದ ಜಂಬರಗಟ್ಟೆ ಹೊರಗಿನ ಮರವೊಂದರ ಕೆಳಗೆ ಕರೆದುಕೊಂಡು ಹೋಗಿದ್ದಾಳೆ. ಪೂಜೆ ಮಾಡಿದ ಕೆಲ ಹೊತ್ತಿನಲ್ಲೆ ಗೀತಮ್ಮ ಮೈ ಮೇಲೆ ದೆವ್ವ ಬಂದವರಂತೆ ಕೂಗಾಡಲು ಶುರು ಮಾಡಿದ್ದಾರೆ. ಅಷ್ಟರಲ್ಲೆ ಆಶಾಳ ಮೈ ಮೇಲೂ ದೇವರು ಬಂದಿದೆ ಎಂದು ಹೇಳಲಾಗುತ್ತಿದೆ. ಆಶಾ – ಗೀತಮ್ಮರಿಬ್ಬರ ಕೂಗಾಟ ಜೋರಾಗಿದೆ. ಶಬ್ದ ಕೇಳಿ ಕೆಲವರು ಸ್ಥಳಕ್ಕೆ ಬಂದು ಇಬ್ಬರ ಕೂಗಾಟ ರಂಪಾಟದ ವೀಡಿಯೋ ಮಾಡಿಕೊಂಡಿದ್ದಾರೆ.ಜನ ಸೇರುತ್ತಿದ್ದಂತೆ ದೇವರು ಬಂದವಳು ಎನ್ನಲಾದ ಆಶಾ ವೀಡಿಯೋ ಮಾಡುತ್ತಿದ್ದ ಕೆಲವರನ್ನು ವಾಪಾಸ್‌ ಕಳುಹಿಸಿ ಪೂಜೆ ಮುಂದುವರೆಸಿದ್ದಾಳೆ. ಅಲ್ಲೆ ಇದ್ದ ಮರದ ಟೊಂಗೆಯೊಂದನ್ನು ಕಿತ್ತುಕೊಂಡ ಆಶಾ, ಗೀತಮ್ಮಗೆ ಥಳಿಸಲು ಶುರು ಮಾಡಿದ್ದಾಳೆ. ನಾನು ಹೋಗುವುದಿಲ್ಲ ಎಂದು ಹಠ ಮಾಡುತ್ತಿದ ಗೀತಮ್ಮರ ತಲೆ ಮೇಲೆ ದೊಡ್ಡ ಗಾತ್ರದ ಕಲ್ಲು ಹೊರಿಸಿ ಕಾಲುವೆಯಲ್ಲಿದ್ದ ತಣ್ಣೀರೆರಚಿದ್ದಾರೆ. ಚಳಿ ತಳಾಲಾಗದೆ ನಡುಗುತ್ತಿದ್ದ ಗೀತಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಗೀತಮ್ಮನ ಮೈಮೇಲಿದ ಆತ್ಮಹೊರ ಹೋಗಿದೆ, ಇನ್ನೂ ಮುಂದೆ ಯಾವುದೇ ತೊಂದರೆ ಇಲ್ಲ, ಎಲ್ಲವೂ ಸರಿಯಾಗಿದೆ ಎಂದು ಗೀತಮ್ಮನನ್ನು ಆಶಾ ಮನೆಗೆ ಕಳಿಸಿದ್ದಾಳೆ.ನಡೆಯಲಾಗದೆ ತೀವ್ರ ಅಸ್ವಸ್ಥವಾಗಿದ್ದ ಗೀತಮ್ಮನನ್ನು ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆಗಾಗಲೇ ಗೀತಮ್ಮ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.ಈ ಸಂಬಂಧ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಥಳಿತದಿಂದ ಹತ್ಯೆಯಾದ ಗೀತಮ್ಮ ಅವರ ಮಗ ಸಂಜಯ್ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿದ್ದು, ದೆವ್ವ ಬಿಡಿಸಿದ ಆರೋಪಿ ಆಶಾಳನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!