Monday, July 27, 2026
spot_imgspot_img
spot_imgspot_img

ಕಾಸರಗೋಡು: ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ; ಕಾರಿನಲ್ಲಿದ್ದ ದಾಖಲೆಗಳು ಸುಟ್ಟು ಭಸ್ಮ..!

- Advertisement -
- Advertisement -

ಕಾಸರಗೋಡು: ಮಸೀದಿಯ ಆವರಣದ ಒಳಗೆ ನಿಲ್ಲಿಸಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ನೆಲ್ಲಿಕಟ್ಟೆ ಸಮೀಪದ ಪೈಕ ಎಂಬಲ್ಲಿ ನಡೆದಿದೆ.

ಇಂದು ಮುಂಜಾನೆ ಮೂರುಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಬೆಂಕಿಯಿಂದ ಕಾರು ಸಂಪೂರ್ಣ ಉರಿದಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ಕಾರಿನಲ್ಲಿದ್ದ ಪಾಸ್ ಫೋರ್ಟ್ ಸೇರಿದಂತೆ ಇತರ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಸಮೀಪದಲ್ಲೇ ಇದ್ದ ಶಾಲಾ ಬಸ್‌ ಮತ್ತು ಸ್ಕೂಟರ್‌ಗೂ ಹಾನಿ ಉಂಟಾಗಿದೆ. ಮಸೀದಿಯ ಉಸ್ತಾದ್ ರಝಾ ಬಾಫಖಿ ಹೈತಮಿ ಎಂಬವರಿಗೆ ಸೇರಿದ ಕಾರು ಎಂದು ತಿಳಿದುಬಂದಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

- Advertisement -

Related news

error: Content is protected !!