Friday, June 27, 2025
spot_imgspot_img
spot_imgspot_img

ರೌಡಿಶೀಟರ್ ಉಲ್ಲಾಳ ಕಾರ್ತಿಕ್​​ನ ಬಂಧನ

- Advertisement -
- Advertisement -

ಬೆಂಗಳೂರು: ಗೂಂಡಾ ಆ್ಯಕ್ಟ್ ಅಡಿ ರೌಡಿಶೀಟರ್ ಉಲ್ಲಾಳ ಕಾರ್ತಿಕ್​​ನನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.ಜ್ಞಾನಭಾರತಿ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿರೋ ಕಾರ್ತಿಕ್, 5 ಕೊಲೆ, 3 ಕೊಲೆಯತ್ನ, 4 ಎನ್​ಡಿಪಿಎಸ್ (Narcotic Drugs and Psychotropic Substances Act) ಅಡಿ ಪ್ರಕರಣಗಳು ದಾಖಲಾಗಿದ್ದವು.

ಅಲ್ಲದೇ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಆರೋಪದಡಿ ಎರಡು ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪ ಕಾರ್ತಿಕ್ ಮೇಲಿದ್ದು, ಸದ್ಯ ಕಾರ್ತಿಕ್​​ನನ್ನ ಬಂಧಿಸಿರುವ ಸಿಸಿಬಿ ಡಿಸಿಪಿ ಬಸವರಾಜ್ ಅಂಗಡಿ ನೇತೃತ್ವದ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ.

- Advertisement -

Related news

error: Content is protected !!