ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಮಟ್ಟದ ಲೆವೆಲ್ ಮಾದರಿಯ 530ಕೆಜಿ ವಿಭಾಗದ 7 ಜನ ಮುಕ್ತ ಪುರುಷರ ಹೊನಲು ಬೆಳಕಿನ ಹಗ್ಗ ಜಗ್ಗಾಟ ಪಂದ್ಯಾಟ



ವಿಟ್ಲ: ಶ್ರೀವರ ಯುವಕ ಮಂಡಲ (ರಿ.) ಪೂರ್ಲಪ್ಪಾಡಿ 4ನೇ ವಾರ್ಷಿಕೆೋತ್ಸವದ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಮಟ್ಟದ ಲೆವೆಲ್ ಮಾದರಿಯ 530ಕೆಜಿ ವಿಭಾಗದ 7 ಜನ ಮುಕ್ತ ಪುರುಷರ ಹೊನಲು ಬೆಳಕಿನ ಹಗ್ಗ ಜಗ್ಗಾಟ ಪಂದ್ಯಾಟ ಫೆಬ್ರವರಿ 21, ಶನಿವಾರದಂದು ರಾತ್ರಿ 9 ಗಂಟೆಯಿಂದ ಶ್ರೀವರ ವೇದಿಕೆ ಮುಂಭಾಗ ಪೂರ್ಲಪ್ಪಾಡಿ ವಿಟ್ಲ ಪಡ್ನೂರಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಘೋಷಿಸಲಾಗಿದೆ. ಪ್ರಥಮ ಬಹುಮಾನ ₹8,026 ಶ್ರೀವರ ಟ್ರೋಪಿ, ದ್ವಿತೀಯ ₹5,026ಶ್ರೀವರ ಟ್ರೋಪಿ, ತೃತೀಯ ₹3,026 ಶ್ರೀವರ ಟ್ರೋಪಿಹಾಗೂ ಚತುರ್ಥ ಬಹುಮಾನ ₹2,026ಶ್ರೀವರ ಟ್ರೋಪಿ.
ಮಧ್ಯಾಹ್ನ 2.30 ರಿಂದ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಪುರುಷರಿಗೆ ಆಟೋಟ ಸ್ಪರ್ಧೆಗಳು, ಸಂಜೆ. 6.00 ಕ್ಕೆ ಮಕ್ಕಳ ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 7.30 ರಿಂದಸಭಾ ಕಾರ್ಯಕ್ರಮ ನಡೆಯಲ್ಲಿದ್ದು ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ರಾಜೇಶ್ ನಾಯಕ್ ಉಳಿಪ್ಪಾಡಿ
(ಮಾನ್ಯ ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ) ವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ಡಾ. ಅವಿನಾಶ್ ಭಟ್ – ಹಿರಿಯ ಪಶು ವೈದ್ಯಾಧಿಕಾರಿ ವಿಟ್ಲ, ಮುಖ್ಯ ಅತಿಥಿಗಳಾಗಿ ಜಯಂತ. ಪಿ – ಅಧ್ಯಕ್ಷರು, ಗ್ರಾಮ ಪಂಚಾಯತ್ ವಿಟ್ಲ ಪಡ್ನೂರು, ರವೀಶ್ ಶೆಟ್ಟಿ ಕರ್ಕಳ – ಉಪಾಧ್ಯಕ್ಷರು ವಿಟ್ಲ ಪಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) ಕೊಡಂಗಾಯಿ, ಮಾಧವ ಮಾವೆ ವಕ್ತಾರರು , ಬಿಜೆಪಿ ದ.ಕ ಜಿಲ್ಲೆ, ಉದಯ ಭಟ್ ನೆಡ್ಯಾಳ ನಿರ್ದೇಶಕರು ವಿಟ್ಲ ಪಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) ಕೊಡಂಗಾಯಿ,
ರಾಮಣ್ಣ ಗೌಡ ದೇವರ ಮನೆ ವಕೀಲರು(ನೋಟರಿ) ಅಧ್ಯಕ್ಷರು ಮಲರಾಯಿ ದೈವಸ್ಥಾನ ಆಡಳಿತ ಸೇವಾ ಟ್ರಸ್ಟ್ ಪೂರ್ಲಪ್ಪಾಡಿ, ಸಂಜೀವ ಪೂಜಾರಿ ಎನ್ ಅಧ್ಯಕ್ಷರು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ನಿ.ವಿಟ್ಲ, ನಾಗೇಶ್ ಶೆಟ್ಟಿ ಕೊಡಂಗಾಯಿ ಸದಸ್ಯರು ಗ್ರಾಮ ಪಂಚಾಯಿತಿ ವಿಟ್ಲ ಪಡ್ನೂರು, ಈಶ್ವರ ಭಟ್ ಪಿ ಗೌರವ ಅಧ್ಯಕ್ಷರು ಶ್ರೀವರ ಯುವಕ ಮಂಡಲ (ರಿ.) ಪೂರ್ಲಪ್ಪಾಡಿ, ಶ್ರೀ ಶೈಲ ಢೋಣೂರ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗ್ರಾಮ ಪಂಚಾಯಿತಿ ವಿಟ್ಲ ಪಡ್ನೂರು, ದರ್ಮಾವತಿ ಪಿಬಿ ನಿರ್ದೆಶಕರು ವಿಟ್ಲ ಪಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) ಕೊಡಂಗಾಯಿ, ಚರಣ್ ಕಾಪುಮಜಲು ಗುತ್ತಿಗೆದಾರರು ವಿಟ್ಲ, ಅರವಿಂದ್ ರೈ ಅಧ್ಯಕ್ಷರು ಶ್ರೀ ಮಲರಾಯಿ ಭಜನಾ ಮಂಡಳಿ ಕಾಪು ಮಜಲು , ರೋಹಿತ್ ರೈ ಚೆಂಬರಡ್ಕ ಅದ್ಯಕ್ಷರು ಶಿಲ್ಪಶ್ರೀ ಯುವಕ ಮಂಡಲ (ರಿ) ಕೊಡಂಗಾಯಿ, ನವೀನ್ ಕುಳಾಲು ಪುಡೆಮಜಲು ಅಧ್ಯಕ್ಷರು ಶಿವಾಜಿ ಫ್ರೆಂಡ್ಸ್ ಸೇವಾ ಟ್ರಸ್ಟ್ (ರಿ) ಮಂಕುಡೆ ಕುಡ್ತಮುಗೇರು, ವಿನಯ ಜೊಗಿ ಕಾಪು ಮಜಲು ಅಧ್ಯಕ್ಷರು ಫ್ರೆಂಡ್ಸ್ ಕಾಪುಮಜಲು (ರಿ) , ಯಶವಂತ್ ಮಾರುತಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ (ರಿ) ಕೋಡಪದವು, ಕಿರಣ್ ಚಂದ್ರ ಆಳ್ವ ಅಧ್ಯಕ್ಷರು ಶ್ರೀವರ ಯುವಕ ಮಂಡಲ (ರಿ.) ಪೂರ್ಲಪ್ಪಾಡಿ, ಶ್ರೀಮತಿ ಜಯಲಕ್ಷ್ಮೀ ಕೆ ಸದಸ್ಯರು ಗ್ರಾಮ ಪಂಚಾಯಿತಿ ವಿಟ್ಲ ಪಡ್ನೂರು ಭಾಗವಹಿಸಲಿದ್ದಾರೆ.








