- Advertisement -
- Advertisement -



ನವದೆಹಲಿ : ದೆಹಲಿಯ ವೃಕ್ಷಿತ್ ಫೌಂಡೇಷನ್ ನಿತ್ಯ ನೈರ್ಮಲ್ಯ ಅಭಿಯಾನ ಹಮ್ಮಿಕೊಂಡಿತ್ತು. ಹೀಗಾಗಿ ಬೀದಿಯಲ್ಲಿ ಕಸ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿದ್ದರು. ಆದರೆ, ಈ ವೇಳೆ ಆಘಾತಕಾರಿ ಘಟನೆ ನಡೆದಿದೆ.
ಕಸ ಸ್ವಚ್ಛಗೊಳಿಸುತ್ತಿದ್ದ ವೃಕ್ಷಿತ್ ಫೌಂಡೇಷನ್ ಸದಸ್ಯರಿಗೆ ಕಸದ ರಾಶಿಯೊಂದಿಗೆ ಅಸ್ಥಿಪಂಜರ ಸಿಕ್ಕಿದೆ. ಅನುಮಾನಾಸ್ಪದ ಅವಶೇಷಗಳು ಸಿಗುತ್ತಿದ್ದಂತೆ ತಂಡ ಸ್ವಚ್ಛತಾ ಅಭಿಯಾನವನ್ನು ನಿಲ್ಲಿಸಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆ.ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಅವಶೇಷಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ. ಸದ್ಯ ತನಿಖೆ ಬಳಿಕ ಸತ್ಯಾಂಶ ಗೊತ್ತಾಗಲಿದೆ ವರದಿಯಿಂದ ತಿಳಿದು ಬಂದಿದೆ.
- Advertisement -








