Saturday, June 28, 2025
spot_imgspot_img
spot_imgspot_img

ಸುಳ್ಯ: ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ!

- Advertisement -
- Advertisement -

ಸುಳ್ಯ: ಸುಳ್ಯ ಪೊಲೀಸರು ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿ, ನಾಲ್ವರನ್ನು ಬಂಧಿಸಿದ್ದಾರೆ.

ಆರೋಪಿಗಳು ನಾಲ್ಕೂರು ಗ್ರಾಮದ ಛತ್ರಪ್ಪಾಡಿ ನಿವಾಸಿ ದಿವಾಕರ ಆಚಾರಿ, ಸುಬ್ರಹ್ಮಣ್ಯ ನೂಚಿಲ ನಿವಾಸಿ ಕಾರ್ತಿಕ್‌, ಬಿಳಿನೆಲೆ ಗ್ರಾಮದ ಚಿದ್ಗಲ್‌ ನಿವಾಸಿ ಅಶೋಕ್‌ ಎ., ಹಾಸನ ಜಿಲ್ಲೆಯ ಹೊಸಕೊಪ್ಪಲು ಹನುಮಂತಪುರ ಗ್ರಾಮದ ಚಂದನ್‌ ಬಂಧಿತರು.

ಆರೋಪಿ ದಿವಾಕರ್‌ ಬಂದೂಕು ತಯಾರಿಸುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಸುಳ್ಯ ಸರ್ಕಲ್‌ ಇನ್‌ಸ್ಪೆಕ್ಟರ್‌ ನವೀನ್‌ಚಂದ್ರ ಜೋಗಿ, ಪಿಎಸ್‌ಐ ಓಮನಾ ಹಾಗೂ ಸಿಬ್ಬಂದಿ ಸೋಮವಾರ ಮನೆಯ ಮೇಲೆ ದಾಳಿ ಮಾಡಿದ್ದು, ದಾಳಿಯ ಸಂದರ್ಭದಲ್ಲಿ ಒಂದು ಬಂದೂಕು ಹಾಗೂ ಒಂದು ಸಜೀವ ತೋಟೆಯನ್ನು ವಶಕ್ಕೆ ಪಡೆಯಲಾಗಿದೆ. ಬಂದೂಕು ತಯಾರಿಸಿ ಕೆಲವು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಾಗಿ ಆರೋಪಿ ದಿವಾಕರ ಹೇಳಿದ್ದು, ಈ ಮಾಹಿತಿಯಂತೆ ಕಾರ್ತಿಕ, ಅಶೋಕ, ಚಂದನ ಎಂಬುವವರನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!