- Advertisement -
- Advertisement -
ರಿಷಿಕೇಶ್: ಚಿಪ್ಕೋ(ಅಪ್ಪಿಕೋ) ಹೆಸರಿನಲ್ಲಿ ದೊಡ್ಡ ಮಟ್ಟದ ಚಳವಳಿಯೊಂದನ್ನ ಹುಟ್ಟುಹಾಕಿ ಕ್ರಾಂತಿ ಮಾಡಿದ ಪರಿಸರವಾದಿ ಸುಂದರ್ ಲಾಲ್ ಬಹುಗುಣ ಇಂದು ಕೊರೊನಾ ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ.
94 ವರ್ಷದ ಸುಂದರ್ಲಾಲ್ ಬಹುಗುಣ ಅವರು ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಈ ಹಿನ್ನೆಲೆ ಅವರನ್ನು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ರಾತ್ರಿಯಿಂದ ಅವರ ಆರೋಗ್ಯ ಗಂಭೀರವಾಗಿದ್ದು ಆಕ್ಸಿಜನ್ ಮಟ್ಟ ಕುಸಿತ ಕಂಡು ಸಾವನ್ನಪ್ಪಿದರು ಎನ್ನಲಾಗಿದೆ.
ಮರಗಳನ್ನು ಕಡಿಯುವುದರ ವಿರುದ್ಧ ನಡೆದ ಅಪ್ಪಿಕೋ ಚಳವಳಿಯನ್ನು ಆರಂಭಿಸಿದ ಕೀರ್ತಿ ಸುಂದರ್ಲಾಲ್ ಬಹುಗುಣ ಅವರಿಗೆ ಸಲ್ಲುತ್ತದೆ. ಅವರ ಪತ್ನಿ ವಿಮ್ಲಾ ಬಹುಗುಣ ಅವರು ಅಪ್ಪಿಕೋ ಚಳುವಳಿಯನ್ನ ಹುಟ್ಟುಹಾಕಿದ್ದರು ಪತಿ ಸುಂದರ್ ಲಾಲ್ ಬಹುಗುಣ ಚಳವಳಿಯನ್ನ ಕೃತಿಗೆ ಇಳಿಸುವ ಮೂಲಕ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
- Advertisement -