- Advertisement -
- Advertisement -
ಬೆಂಗಳೂರು: ನಗರದಲ್ಲಿ ಮತ್ತೆ ರೌಡಿ ಶೀಟರ್ ಗಳ ನಡುವೆ ಲಾಂಗ್ ವಾರ್ ನಡೆದಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎರಡು ರೌಡಿ ಶೀಟರ್ ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಓರ್ವ ರೌಡಿ ಶೀಟರ್ ಕೈ ಕತ್ತರಿಸಿ ಹೋಗಿದೆ.
ಬೆಂಗಳೂರಿನ 2 ರೌಡಿ ಶೀಟ್ ಗುಂಪುಗಳಾದ ಸ್ಲಂ ಭರತ್ ಶಿಷ್ಯ ಚಂದನ್ ಹಾಗೂ ಟಿಂಬರ್ ಕಿಟ್ಟಿ ಗ್ಯಾಂಗ್ ನಡುವೆ ಮಚ್ಚು, ಲಾಂಗ್ ನಿಂದ ಡೆಡ್ಲಿ ಅಟ್ಯಾಕ್ ನಡೆದಿದೆ.
ಸ್ಲಂ ಭರತ್ ಎನ್ ಕೌಂಟರ್ ನಂತ್ರ ಫೀಲ್ಡ್ ನಿಂದ ದೂರ ಉಳಿದಿದ್ದಂತ ಚಂದನ್ ಮೇಲೆ ಗಣಪತಿ ನಗರದಲ್ಲಿ ಇಂದು ಮುಂಜಾನೆ, ಕಿಟ್ಟಿ ಗ್ಯಾಂಗ್ ರಿವರ್ಸ್ ಅಟ್ಯಾಕ್ ಮಾಡಿದೆ. ಈ ದಾಳಿಯಲ್ಲಿ ರೌಡಿ ಶೀಟರ್ ಚೆಂದನ್, ಕೈ ಕತ್ತರಿಸಿ ಹೋಗಿದ್ದು, ನಗರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತ ಸ್ಥಳಕ್ಕೆ ಬ್ಯಾಟರಾಯನಪುರದ ಪೊಲೀಸರು ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.
- Advertisement -