- Advertisement -
- Advertisement -
ಉಡುಪಿ: ಕಳೆದ ಕೆಲವು ದಿನಗಳಿಂದ ಬನ್ನಂಜೆ ಮೂಲದ ವ್ಯಕ್ತಿಯು ಅನಾರೋಗ್ಯದಿಂದಾಗಿ ಉಡುಪಿ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ರಮಿಕ ತರುಣರ ತಂಡ ಬೈರಂಪಳ್ಳಿ ವತಿಯಿಂದ ಚಿಕಿತ್ಸಾ ನೆರವನ್ನು ಒದಗಿಸಲಾಗಿತ್ತು.
ಕೊರೊನ ಸೋಂಕಿನ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿಯು ನಿಧನ ಹೊಂದಿದ್ದಾರೆ. ವಿಧಿಯ ಕ್ರೂರ ಆಟಕ್ಕೆ ಬಡ ಕುಟುಂಬದ ಆಧಾರವನ್ನೇ ಕಿತ್ತುಕೊಂಡಿತು. ಮಕ್ಕಳು ಇಲ್ಲದೆ ನೊಂದ ಅವರ ಪತ್ನಿಯ ನೋವು ಮುಗಿಲು ಮುಟ್ಟಿತ್ತು. ಪತ್ನಿಯ ಮನವಿ ಹಾಗು ಎಲ್ಲೂರು ಗ್ರಾ.ಪಂ ಮಾಜಿ ಅಧ್ಯಕ್ಷರು ಶ್ರೀಮತಿ ವಸಂತಿ ಮಧ್ವರಾಜ್ ರವರ ಮನವಿ ಮೇರೆಗೆ ಶ್ರಮಿಕ ತರುಣರ ತಂಡದ ಅಧ್ಯಕ್ಷರು ಪ್ರಕಾಶ್ ಕುಲಾಲ್ ನೇತೃತ್ವದಲ್ಲಿ ನಾಗಾರ್ಜುನ ಪೂಜಾರಿ ಸಹಕಾರದಲ್ಲಿ ಮೃತರ ಅಂತ್ಯಕ್ರಿಯೆಯನ್ನು ವಿಧಿವತ್ತಾಗಿ ನಡೆಸಲಾಯಿತು. ಈ ಕಾರ್ಯದಲ್ಲಿ ಶ್ರಮಿಕ ತರುಣರ ತಂಡದ ಗೌರವಾಧ್ಯಕ್ಷರು ಸಂತೋಷ್ ಕುಮಾರ್ ಬೈರಂಪಳ್ಳಿ ಮತ್ತು ಶೋಧನ್ ಸುವರ್ಣ ಉಪಸ್ಥಿತರಿದ್ದರು.
- Advertisement -