- Advertisement -
- Advertisement -
ಉಪ್ಪಿನಂಗಡಿ: ಬಾಲಕೃಷ್ಣ ಶೆಟ್ಟಿ ಎಂಬವರಿಗೆ ಸೇರಿದ ಶ್ರೀಗಂಧದ ಮರವನ್ನು ಕಡಿದು ರಾತ್ರೋ ರಾತ್ರಿ ಕದೊಯ್ದ ಘಟನೆ ಕಡಬ ತಾಲೂಕು ಪರಾರಿ ಮನೆ ಎಂಬಲ್ಲಿ ನಡೆದಿದೆ.
ಸುಮಾರು 14 ವರ್ಷದ ಹಿಂದೆ ನೆಟ್ಟಿದ್ದ ಶ್ರೀಗಂಧ ಮರವನ್ನು ಯಾರೋ ಕಳ್ಳರು ಆಗಸ್ಟ್ 3ರಂದು ರಾತ್ರಿ ಕಡಿದು ತುಂಡುಗಳನ್ನಾಗಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಳವಾದ ಶ್ರೀಗಂಧ ಮರದ ಮೌಲ್ಯ 15,000 ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -