ವಿಟ್ಲ: ವಿಟ್ಲದ ವಿ ಹೆಚ್ ಕಾಂಪ್ಲೆಕ್ಸ್ ನಲ್ಲಿರುವ ಉಮ್ಮರ್. ಕೆ ಎಂಬ ವಕೀಲ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಟ್ಲ ಮೂಲದ ಯುವತಿಯೋರ್ವಳೊಂದಿಗೆ ವಕೀಲ ಉಮ್ಮರ್ ಅಸಭ್ಯವಾಗಿ ವರ್ತಿಸಿದಲ್ಲದೇ ಇದನ್ನು ಮನೆಗೆ ತಿಳಿಸಿದರೆ ನಿನ್ನ ಮರ್ಯಾದೆ ಹೋಗುತ್ತದೆ ಎಂದು ಹೆದರಿಸಿ ಪ್ರಕರಣ ಮುಚ್ಚಿಹಾಕಲು ನೋಡಿದ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಯ ಬಗ್ಗೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿ ಉಮ್ಮಾರ್ ನ್ನು ಬಂಧಿಸಿ ಕೆಲ ಸಮಯದಲ್ಲೇ ಜಾಮೀನು ತೆಗೆದುಕೊಂಡು ಹೊರಗೆ ಬಂದ ತಕ್ಷಣ ಕಂಪ್ಲೇಂಟ್ ಮಾಡಿದ ಯುವತಿಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ.
ಇದು ಲವ್ ಜಿಹಾದ್ ಆಗಿದ್ದು. ಇಂತಹ ಲವ್ ಜಿಹಾದ್ ಗಳ ಹಾವಳಿ ಕರಾವಳಿಯಾಧ್ಯಂತ ಅಧಿಕವಾಗಿ ನಡೆಯುತ್ತಿದೆ. ಇದನ್ನು ಹಿಂದು ಜಾಗರಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ವಿಟ್ಲ ತಾಲೂಕು ಹಿಂ.ಜಾ.ವೆ ಮಾತೃಸುರಕ್ಷಾ ಸಂಯೋಜಕ ಲಿತೀಶ ಗಡಿಯಾರ ತಿಳಿಸಿದ್ದಾರೆ.
ಅಲ್ಲದೆ ಇಂತಹ ಕೃತ್ಯಗಳಿಂದ ಹಿಂದುಗಳ ನಾಶ ಮಾಡಿ ಮುಸಲ್ಮಾನ ದೇಶ ಮಾಡುವ ಅತೀ ದೊಡ್ಡ ಸಂಚು ಈ ಜಿಹಾದಿಗಳದ್ದಾಗಿದೆ. ಇದನ್ನು ತೀವ್ರವಾಗಿ ಖಂಡಿಸಿ ಜಿಹಾದಿಗಳಿಗೆ ಜೀವಾವದಿ ಶಿಕ್ಷೆಯೇ ಆಗಬೇಕು ಹಾಗೂ ಮುಂದಿನ ದಿನಗಳಲ್ಲಿ ಲವ್ ಜಿಹಾದಿನ ವಿರುದ್ದ ವಿಟ್ಲದಲ್ಲಿ ಅತಿ ದೊಡ್ಡ ಪ್ರತಿಭಟನೆ ನಡೆಯಲಿದೆ ಎಂದು ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಅಧ್ಯಕ್ಷ ಗಣೇಶ ಕುಲಾಲ್ ಕೆದಿಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.