- Advertisement -
- Advertisement -



ವಿಟ್ಲ : ವಿಟ್ಲ-ಸಾಲೆತ್ತೂರು ರಸ್ತೆಯ ರಾಜ್ಯ ಹೆದ್ದಾರಿ ಸಂಖ್ಯೆ(101)ರಲ್ಲಿನ ಪರ್ತಿಪ್ಪಾಡಿ ಚಂಬರಡ್ಕದಲ್ಲಿ ಮುಖ್ಯರಸ್ತೆಯ ಮಧ್ಯದಲ್ಲೇ ದಿಢೀರನೆ ಬಾಯ್ದೆರೆದ ಗುಂಡಿ. ವಾಹನ ಸವಾರರ ಪ್ರಾಣಬಲಿಗಾಗಿ ಕಾಯುತ್ತಿರುವ ಈ ಮೃತ್ಯುಕೂಪವನ್ನು ತಕ್ಷಣವೇ ಮುಚ್ಚದಿದ್ದಲ್ಲಿ ಯಾವುದೇ ಕ್ಷಣ ಅಪಾಯ ಕಟ್ಟಿಟ್ಟಬುತ್ತಿಯಾಗಲಿದೆ ಎಂದು ಪ್ರತ್ಯಕ್ಷ ದರ್ಶಿಗಳು.

ಇದೇ ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಬಸ್ ಕಂಡಕ್ಟರ್ ಬಸಬೆಟ್ಟು ಮುಸ್ತಫಾ ಮತ್ತು ಕಾಡುಮಠ ಪುಷ್ಪರಾಜ್ ಅಪಾಯವನ್ನರಿತು ಮರಣಗುಂಡಿಯ ಸುತ್ತ ಕಲ್ಲುಗಳನ್ನು ಇಡುವ ಮೂಲಕ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.



- Advertisement -