- Advertisement -
- Advertisement -
ವಿಜಯನಗರ: ಬಳ್ಳಾರಿ ಜಿಲ್ಲೆಯೊಂದಿಗೆ ಸೇರಿಕೊಂಡಿದ್ದ ವಿಜಯನಗರವು, ಇಂದು ನೂತನ ಜಿಲ್ಲೆಯಾಗಿ ಉದಯವಾಗಲಿದೆ. ಈ ಮೂಲಕ 6 ತಾಲೂಕುಗಳ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ಹೊರಹೊಮ್ಮಲ್ಲಿದ್ದು ಇಂದು ಅಧಿಕೃತವಾಗಿ ಚಾಲನೆ ದೊರಕಲಿದೆ.
ಹಂಪಿಯ ಮಾದರಿಯಲ್ಲಿ ಅದ್ದೂರಿಯಾಗಿ ಆಯೋಜಿಸಿರುವ ಕಾರ್ಯಕ್ರಮದ ಬೃಹತ್ ವೇದಿಕೆಯಲ್ಲಿ, ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ವಿಜಯನಗರ ಜಿಲ್ಲೆಗೆ ಚಾಲನೆ ನೀಡಲಿದ್ದಾರೆ. 80ಕ್ಕೂ ಹೆಚ್ಚು ಕಲಾತಂಡಗಳಿಂದ ಇಂದು ಸಂಜೆ ವಿಜಯನಗರ ಜಿಲ್ಲೆ ಉದಯಕ್ಕೂ ಮುನ್ನಾ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ವಿಜಯನಗರ ವೈಭವದ ಮೆರವಣಿಗೆ ಸಾಗಲಿದೆ. ನೂತನ ಜಿಲ್ಲೆಯಾಗಿ ಉದಯವಾಗುತ್ತಿರುವಂತ ಈ ಸಂದರ್ಭದಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರಗೊ0ಡ ಹೊಸಪೇಟೆ ನಗರ, ಕಂಗೊಳಿಸುತ್ತಿದೆ.
- Advertisement -