Saturday, June 28, 2025
spot_imgspot_img
spot_imgspot_img

ಮಣಿಪಾಲ: ವ್ಯಕ್ತಿ ಮೇಲೆ ಹಲ್ಲೆ; ಚಿನ್ನದ ಚೈನ್, ಮೊಬೈಲ್ ಹಾಗೂ ಸ್ಕೂಟರ್’ನೊಂದಿಗೆ ಆರೋಪಿ ಪರಾರಿ..!

- Advertisement -
- Advertisement -
vtv vitla
vtv vitla
vtv vitla

ಮಣಿಪಾಲ: ಇಲ್ಲಿನ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಪರಿಚಿತನೇ ದೋಖಾ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಉಡುಪಿ ಹೆರ್ಗಾ ನಿವಾಸಿ ರಮೇಶ್ ಆಚಾರ್ಯ ಎಂಬವರಿಗೆ ಪರಿಚಿತನಾದ ಪ್ರಶಾಂತ್ ಎಂಬಾತನಿಂದಲೇ ದೋಖಾ ಆಗಿದೆ.

ಶನಿವಾರ ರಾತ್ರಿ 9ಗಂಟೆ ಸುಮಾರಿಗೆ ರಮೇಶ್ ಅವರು ಆರೋಪಿ ಪ್ರಶಾಂತ್ ನನ್ನು ಭೇಟಿಯಾಗಿದ್ದರು. ಬಳಿಕ ಪ್ರಶಾಂತ್, ಡ್ರಿಂಕ್ಸ್ ಕುಡಿಯುವ ಎಂದು ಹೇಳಿದಂತೆ ಉಡುಪಿಯಲ್ಲಿ ಬಿಯರ್ ಖರೀದಿಸಿ ಇಬ್ಬರೂ ಕರಂಬಳ್ಳಿ ಗುಜರಿ ಅಂಗಡಿಯ ಬಳಿ ಹೋಗಿ ಬಿಯರ್ ಸೇವನೆ ಮಾಡಿದ್ದಾರೆ.

vtv vitla

ಬಳಿಕ ರಾತ್ರಿ ಸುಮಾರು 10.30ಕ್ಕೆ ಪ್ರಶಾಂತ್ ನು ರಮೇಶ್ ಅವರ ಮೊಬೈಲ್ ನೀಡುವಂತೆ ಕೇಳಿದ್ದಾನೆ. ಆದರೆ, ರಮೇಶ್ ಮೊಬೈಲ್ ನೀಡಲು ನಿರಾಕರಿಸಿದ್ದಾರೆ. ಆಗ ಆತ ರಮೇಶ್ ಮುಖಕ್ಕೆ ಕೈಯಿಂದ ಹೊಡೆದು ಮೊಬೈಲ್ ಪೋನನ್ನು ಕಸಿದುಕೊಂಡಿದ್ದಾನೆ.

vtv vitla

ಮೊಬೈಲ್ ವಾಪಾಸ್ ನೀಡುವಂತೆ ಹೇಳಿದಾಗ ಆರೋಪಿ ಪ್ರಶಾಂತ್ ಹಲ್ಲೆ ಮಾಡಿ, ರಮೇಶ್ ಕುತ್ತಿಗೆಯಲ್ಲಿದ್ದ ಗ್ರಾಂ ತೂಕದ ಚಿನ್ನದ ಚೈನ್ ಹಾಗೂ ಸ್ಕೂಟರ್ ಕೀಯನ್ನು ಸುಲಿಗೆ ಮಾಡಿ ಸ್ಕೂಟರ್‌ನೊಂದಿಗೆ ಪರಾರಿಯಾಗಿದ್ದಾನೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

vtv vitla
vtv vitla
vtv vitla
vtv vitla
vtv vitla
- Advertisement -

Related news

error: Content is protected !!