Saturday, June 28, 2025
spot_imgspot_img
spot_imgspot_img

ಬಂಟ್ವಾಳ: ಅಕ್ರಮ ಕಟ್ಟಿಗೆ ಸಾಗಾಟ; ಸೊತ್ತುಗಳು ವಶ.!

- Advertisement -
- Advertisement -
vtv vitla

ಬಂಟ್ವಾಳ: ಅಕ್ರಮ ಕಟ್ಟಿಗೆ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಘಟನೆ ಬಿ. ಸಿ.ರೋಡಿನಲ್ಲಿ ನಡೆದಿದೆ.

ಡಿ.೧೫ರಂದು ರಾತ್ರಿ ಬಿ. ಸಿ ರೋಡು ಸರ್ಕಲ್ ಬಳಿ ಖಚಿತ ಮಾಹಿತಿ ಮೇಲೆ ಕಾರ್ಯಚರಣೆ ನಡೆಸಿದ ಅರಣ್ಯ ಅಧಿಕಾರಿಗಳು ಲಾರಿ ಸಹಿತ ಐದು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಡಿಎಫ್‌‌‌‌‌ಒ ಡಾ. ದಿನೇಶ್ ಕುಮಾರ್ ಹಾಗೂ ಎಸಿಎಫ್‌‌ ಸುಬ್ರಮಣ್ಯ ರಾವ್ ಅವರ ಮಾರ್ಗದರ್ಶನ ದಲ್ಲಿ, ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯ ಅರಣ್ಯಾಧಿಕಾರಿ ಪ್ರೀತಂ, ಅರಣ್ಯ ರಕ್ಷಕರಾದ ದಯಾನಂದ, ರವಿಕುಮಾರ್, ಅನಿತಾ, ಲಕ್ಮೀನಾರಾಯಣ, ಅರಣ್ಯ ವೀಕ್ಷಕ ಜಯರಾಮ್, ವಾಹನ ಜಯಚಾಲಕ ಜಯರಾಮ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

vtv vitla

- Advertisement -

Related news

error: Content is protected !!