


ಕಾರ್ಕಳ: ಮಾಳಹುಕ್ರಟ್ಟೆ ರಸ್ತೆಯಲ್ಲಿ ರಾತ್ರಿ ಪಾಳಿಯಲ್ಲಿ ನಿರತರಾಗಿದ್ದ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಹಾಗೂ ಸಿಬ್ಬಂದಿಗಳ ಮೇಲೆ ಕಾರು ಚಲಾಯಿಸಲು ಮುಂದಾಗಿ ಕೊಲೆಗೆ ಪ್ರಯತ್ನಿಸಿದ ಘಟನೆ ಸಂಭವಿಸಿದೆ.
ಪೊಲೀಸರು ವಾಹನ ತಪಾಸಣೆ ನಡೆಸುತಿದ್ದ ವೇಳೆ ಗೋವುಗಳನ್ನು ತುಂಬಿದ ಕಾರು ಮತ್ತು ರಕ್ಷಣೆ ಒದಗಿಸಲು ಬರುತಿದ್ದ ಬೈಕನ್ನು ರಸ್ತೆಗೆ ಬ್ಯಾರಿಕೇಡ್ ಅಡ್ಡ ಇಟ್ಟು ತಡೆಯಲು ಯತ್ನಿಸಿದ್ದು, ಆ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ.
- ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ತಾಲೂಕಿನ ಮಿಜಾರು ಹಂಡೇಲಿನ ನಿವಾಸಿ ಸಯ್ಯದ್ ಜುಹಾದ್(31) ಬಂಧಿತ. ಈತ ಗೋ ಸಾಗಾಟ ವಾಹನದ ಮಾಹಿತಿದಾರನಾಗಿ ಕುಕೃತ್ಯದಲ್ಲಿ ಸಕ್ರಿಯಾಗೊಂಡಿದ್ದನು.ಪ್ರಕರಣದಲ್ಲಿ ಭಾಗಿಯಾಗಿರುವ ಫಿರೋಜ್, ಮೈಯದ್ದಿ, ಸುರೇಶ್ ಆರೋಪಿತರು.


ಇನ್ನು ಪೊಲೀಸರು ಗಾಯಗೊಂಡರೂ ಪೊಲೀಸ್ ಜೀಪಿನಲ್ಲಿ ಕಾರು ಮತ್ತು ಬೈಕ್ ಅನ್ನು ಬೆನ್ನತ್ತಿದ್ದು, ಇದೆ ವೇಳೆ ಗೋವುಗಳಿದ್ದ ಕಾರು ಪರಾರಿಯಾಗಿದ್ದು, ಬೈಕ್ ಸವಾರ ಬಿದ್ದು ಗಾಯಗೊಂಡಿದ್ದು ಆತನನ್ನು ಪೊಲಿಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಬೈಕ್ ಸಂಪೂರ್ಣ ಹಾನಿಯಾಗಿದ್ದು, ಗ್ರಾಮಾಂತರ ಎಸ್ ಐ ತೇಜಸ್ವಿ ಹಾಗೂ ಒರ್ವ ಪೊಲೀಸರಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಎಸ್ ಐ ತೇಜಸ್ವಿ, ಅಕ್ರಮ ಗೋ ಸಾಗಾಟ ತಡೆಯುವ ವೇಳೆ ಕಾರಿನಲ್ಲಿದ್ದವರು ವಾಹನವನ್ನು ಮೈಮೇಲೆ ಹತ್ತಿಸಲು ಬಂದಿದ್ದು ನಾವು ಪ್ರಾಣಾಪಯದಿಂದ ಪಾರಾಗಿದ್ದೇವೆ. ನನಗೆ ಹಾಗೂ ಇನ್ನೋರ್ವ ಪೊಲೀಸ್ ಸಿಬಂದಿಗೆ ಘಟನೆಯಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಗೆ ತೆರಳಿ ಇಂಜೆಕ್ಷನ್ ಪಡೆದುಕೊಂಡಿದ್ದೇವೆ. ಬೈಕ್ ನಲ್ಕಿದ್ದ ಓರ್ವ ಆರೋಪಿ ವಶದಲ್ಲಿದ್ದು ಆತನನ್ನು ತನಿಖೆ ನಡೆಸುತ್ತೇವೆ. ಹೆಚ್ಚಿನ ಮಾಹಿತಿ ಈಗ ಬಹಿರಂಗ ಪಡಿಸಲಾಗದು ಎಂದರು.


