Saturday, June 28, 2025
spot_imgspot_img
spot_imgspot_img

ವಕೀಲೆ ಅನುಮಾನಾಸ್ಪ ಸಾವು: ವರದಿಕ್ಷಿಣೆ ಕಿರುಕುಳದ ಶಂಕೆ – ಗಂಡ, ಮಾವ ಅಂದರ್..!

- Advertisement -
- Advertisement -

ಮೈಸೂರು: ಇಲ್ಲಿನ ರಾಮಕೃಷ್ಣ ನಗರ ನಿವಾಸಿ ವಕೀಲೆ ಚಂದ್ರಕಲಾ (32) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಸಂಬಂಧ ಮೃತಳ ಗಂಡ ಮತ್ತು ಮಾವನನ್ನು ಕುವೆಂಪುನಗರ ಪೊಲೀಸರು ವಶಕ್ಕೆ ಪಡೆದಿದ್ದು, ಅತ್ತೆ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಚಂದ್ರಕಲಾ 2019ರಲ್ಲಿ ಪ್ರದೀಪ್‌ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರಿಗೆ ಆರು ತಿಂಗಳ ಒಂದು ಮಗು ಇದೆ ಎನ್ನಲಾಗಿದೆ. ಜೊತೆಗೆ ವರದಕ್ಷಿಣೆ ವಿಚಾರವಾಗಿ ಆಗಾಗ ಕುಟುಂಬದಲ್ಲಿ ಗಲಾಟೆಗಳು ನಡೆಯುತ್ತಿದ್ದವು ಎಂದು ಮೃತಳ ಸಂಬಂಧಿಗಳು ಆರೋಪಿಸಿದ್ದಾರೆ.

ಶನಿವಾರ ಬೆಳಗ್ಗಿನ ಜಾವ ಚಂದ್ರಕಲಾ ಪತಿ ಪ್ರದೀಪ್‌ ತನ್ನ ಮಾವನ ಮನೆಗೆ ಕರೆ ಮಾಡಿ ಆಸ್ಪತ್ರೆ ಬಳಿ ಬರುವಂತೆ ತಿಳಿಸಿದ್ದಾನೆ. ಅಷ್ಟರಲ್ಲಾಗಲೇ ಚಂದ್ರಕಲಾ ಮೃತಪಟ್ಟಿದ್ದು, ಇದು ವರದಕ್ಷಿಣೆ ಕಿರುಕುಳದಿಂದ ನಡೆದಿರುವ ಕೊಲೆ ಎಂದು ಮೃತಳ ಪೋಷಕರು ಪ್ರದೀಪ್‌ ಮತ್ತು ಆತನ ತಂದೆ, ತಾಯಿ ವಿರುದ್ಧ ಕುವೆಂಪುನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಪ್ರದೀಪ್‌ ಮತ್ತು ಆತನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರದೀಪ್‌ ತಾಯಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

- Advertisement -

Related news

error: Content is protected !!