- Advertisement -
- Advertisement -
ಬಂಟ್ವಾಳ:- ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿಯಲ್ಲಿ ಗೋಡೆಯ ಇಟ್ಟಿಗೆ ಕುಸಿದು ಬಿದ್ದು ಓರ್ವ ಯುವಕ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರವಿವಾರ ನಡೆದಿದೆ.
ಶಂಭೂರು ನಿವಾಸಿ ಜನಾರ್ದನ(38) ಮೃತಪಟ್ಟ ವ್ಯಕ್ತಿ. ರವಿವಾರ ರಜಾದಿನವಾಗಿದ್ದರಿಂದ ಮಾದುಕೋಡಿಯಲ್ಲಿ ನಡೆಯುತ್ತಿದ್ದ ಶ್ರಮದಾನದಲ್ಲಿ ಪಾಲ್ಗೊಳ್ಳುವುದಕ್ಕೆ ವ್ಯಕ್ತಿ ತೆರಳಿದ್ದು, ಆ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.ಬಂಟ್ವಾಳ ಗ್ರಾಮಾಂತರ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
- Advertisement -