- Advertisement -
- Advertisement -

ಕ್ಷುಲ್ಲಕ ಬೈಕ್ ವಿಚಾರಕ್ಕೆ ಸಂಬಂಧಿಸಿ ಜಗಳ ನಡೆದು ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಂಗಾವತಿಯ ಕನಕಗಿರಿಯಲ್ಲಿ ನಡೆದಿದೆ. ಸಪ್ಲಯರ್ಸ್ ಶಾಮಿಯಾನ ಅಂಗಡಿ ಮಾಲೀಕ ರವೀಂದ್ರ ಕುಮಾರ ಮಹಾಂತಪ್ಪ(31) ಕೊಲೆಯಾದ ಯುವಕ. ಈತನನ್ನು ಈರಪ್ಪ ಹಡಪದ ಎಂಬಾತ ಕೊಲೆ ಮಾಡಿದ್ದಾನೆ.
ಮೃತ ಯುವಕ ಮತ್ತು ಕೊಲೆ ಆರೋಪಿ ಇಬ್ಬರು ಗೆಳೆಯರಾಗಿದ್ದರು. ಕ್ಷುಲ್ಲಕ ಬೈಕ್ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ವಾಗ್ವಾದ ನಡೆದು ಈರಪ್ಪ, ರವೀಂದ್ರನಿಗೆ ಚೂರಿಯಿಂದ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ರವೀಂದ್ರಗೆ ಕನಕಗಿರಿಯ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಗಂಗಾವತಿಯ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ರವೀಂದ್ರ ಮೃತಪಟ್ಟಿದ್ದಾಗಿ ಮೃತನ ಸಹೋದರ ಮಂಜುನಾಥ ದೂರು ನೀಡಿದ್ದು, ಇದೀಗ ಕೊಲೆ ಕೇಸ್ ದಾಖಲಾಗಿದೆ.

- Advertisement -