- Advertisement -
- Advertisement -
ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಕುಮುಟ ತಾಲ್ಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಸಂಭವಿಸಿದೆ.
ಕಡಲತೀರದ ಬಳಿ ಈ ಯುವಕರು ಈಜಲು ತೆರಳಿದ್ದರು. ಸಮುದ್ರಪಾಲಾಗಿದ್ದವರ ಪೈಕಿ ಓರ್ವ ಯುವಕ 17 ವರ್ಷದ ಸುಹಾಸ್ ಮೃತದೇಹ ಪತ್ತೆಯಾಗಿದೆ. ಸದ್ಯ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಕಣ್ಮರೆಯಾಗಿರುವ ಇನ್ನೋರ್ವ ಬಾಲಕ ಮಂಡ್ಯ ಮೂಲದ 15 ವರ್ಷದ ಉಲ್ಲಾಸ್ನಿಗಾಗಿ ಶೋಧ ಮುಂದುವರೆಸಿದ್ದಾರೆ.
8 ಮಂದಿ ಸ್ನೇಹಿತರ ತಂಡ ಮೈಸೂರಿನಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು. ಬೆಳಿಗ್ಗೆ ಈಜಾಡುವ ನಿಟ್ಟಿನಲ್ಲಿ ಸಮುದ್ರಕ್ಕೆ ಇಳಿದಿದ್ದು ಈ ವೇಳೆ ಅಲೆಗಳ ಅಬ್ಬರ ಹೆಚ್ಚಿದ್ದ ಹಿನ್ನಲೆ ಇಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಕರಾವಳಿ ಕಾವಲು ಪಡೆಗೂ ಸಹ ಮಾಹಿತಿ ನೀಡಿರುವ ಗೋಕರ್ಣ ಪೊಲೀಸರು ಕಣ್ಮರೆಯಾಗಿರುವ ಬಾಲಕನ ಪತ್ತೆಗೆ ಮುಂದಾಗಿದ್ದಾರೆ.
- Advertisement -