Friday, April 26, 2024
spot_imgspot_img
spot_imgspot_img

ಮಂಗಳೂರು ಅರಣ್ಯ ಸಂಚಾರಿ ದಳದಿಂದ ಬೃಹತ್ ಕಾರ್ಯಚರಣೆ; 20 ಕೃಷ್ಣ ಮೃಗದ ಚರ್ಮ ಸಹಿತ ಆರು ಮಂದಿ ಬಂಧನ.

- Advertisement -G L Acharya panikkar
- Advertisement -

ಮಂಗಳೂರು:- ಮಂಗಳೂರು ಅರಣ್ಯ ಸಂಚಾರಿ‌ ದಳ  ಅಧಿಕಾರಿ ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಯಾದಗಿರಿಗೆ ತೆರಳಿ ಕೃಷ್ಣ ಮೃಗದ ಚರ್ಮದ ಬೃಹತ್ ದಂಧೆಯನ್ನು ಬೇಧಿಸಿದ್ದು, ಆರು ಜನ ಆರೋಪಿಗಳ ಸಹಿತ ಸೊತ್ತುಗಳನ್ನು ಸ್ಥಳೀಯ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಿರುವ ಬಗ್ಗೆ ವರದಿಯಾಗಿದೆ.

ಬಂದಿತ ಆರೋಪಿಗಳಿಂದ  20 ಕೃಷ್ಣ ಮೃಗದ ಚರ್ಮ, 2 ಕೃಷ್ಣ ಮೃಗದ ಟ್ರೋಫಿ (ತಲೆಯ ಭಾಗ),  ಒಂದು ಜೀವಂತ ಹೆಣ್ಣು ಮರಿ ಹಾಗೂ ದಂಧೆಗೆ ಬಳಸಿದ ಮೂರು ಬೈಕ್ ಸೇರಿದಂತೆ ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.  ಕಾರ್ಯಾಚರಣೆಯಲ್ಲಿ ಮಂಗಳೂರು ಫಾರೆಸ್ಟ್ ಸ್ಕ್ವಾಡ್ ನ ಸಬ್ ಇನ್ಸ್‌ಪೆಕ್ಟರ್ ಪುರುಷೋತ್ತಮ, ಹೆಡ್ ಕಾನ್ಸ್‌ಟೇಬಲ್ ಜಗನ್ನಾಥ, ಸಿಬ್ಬಂದಿಗಳಾದ ಪ್ರವೀಣ್ ಜೆ, ಉದಯ ಕುಮಾರ್, ಮಹೇಶ್, ಶಿವಾನಂದ ಜಗದೀಶ್ ಇದ್ದರು.

- Advertisement -

Related news

error: Content is protected !!