- Advertisement -
- Advertisement -
ಬೈಂದೂರು ನಾಲೈದು ದಿನಗಳಿಂದ ಎಡ್ತರೆ ಪರಿಸರದಲ್ಲಿ ಬಿಕ್ಷೆ ಬೇಡುತ್ತಿದ್ದ ಅಪರಿಚಿತ ವ್ಯಕ್ತಿಯ ಮೃತದೇಹ ಎಡ್ತರೆ ಗ್ರಾಮದ ಸೊಸೈಟಿಯ ಎದುರು ಪತ್ತೆಯಾಗಿದೆ.
ಮೃತ ವ್ಯಕ್ತಿ ಸುಮಾರು 60 ದಿಂದ 65 ವರ್ಷದವರಾಗಿದ್ದು, ಮಲಗಿದ ಸ್ಥಿತಿಯಲ್ಲಿ ಮೃತ ಪಟ್ಟಿರುವುದು ಕಂಡು ಬಂದಿದೆ.
ಇವರು ನಾಲ್ಕೈದು ದಿನಗಳಿಂದ ಎಡ್ತರೆ ಪರಿಸರದಲ್ಲಿ ಬಿಕ್ಷೆ ಬೇಡುತ್ತಾ ಸೊಸೈಟಿ ಜಗಲಿಯಲ್ಲಿ ಮಲಗಿಕೊಂಡಿದ್ದವರು. ವಯೋಸಹಜ ಖಾಯಿಲೆಯಿಂದ ಅಥವಾ ಇನ್ನಾವುದೋ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆರೋಗ್ಯದಲ್ಲಿ ಏರುಪೇರಾಗಿ ಜ. 28 ರ ರಾತ್ರಿಯಿಂದ ಜ.29ರ ಬೆಳಗ್ಗಿನ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂಬುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -