- Advertisement -
- Advertisement -
ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಪ್ರಧಾನ ದೈವ ಹಾಗೂ ವಿಟ್ಲ ಹೊಸಮನೆಯ ಜೈನ ಕುಟುಂಬಸ್ಥರ ಆರಾಧ್ಯ ದೈವ ಶ್ರೀ ಅರಸು ಮುಂಡಾಲತ್ತಾಯರ ನೇಮವು ದಿನಾಂಕ 14-04-2024ನೇ ಆದಿತ್ಯವಾರ ದಿವಾ ಗಂಟೆ 10.00 ಕ್ಕೆ ವಿಟ್ಲ ಹೊಸಮನೆ ಜೈನ ಕುಟುಂಬಸ್ಥರೆಲ್ಲರೂ ಸೇರಿ ವೇದಮೂರ್ತಿ ಕೀರ್ತನ್ ಕೆದಿಲಾಯರು ಮತ್ತು ವಿಟ್ಲ ಅರಮನೆ ಬಂಗಾರು ಅರಸರ ಉಪಸ್ಥಿತಿಯಲ್ಲಿ ದೇವಸ್ಯಬೈಲಿನ ಮುಂಡಾಲತ್ತಾಯರ ಸನ್ನಿಧಿಯಲ್ಲಿ ನಡೆಯಲಿರುವುದು.
ಬೆಳಿಗ್ಗೆ ಗಂಟೆ : 8.00ಕ್ಕೆ ಗಣಹೋಮ ಬಳಿಕ ಭಂಡಾರ ತೆಗೆಯುವುದು ಬೆಳಿಗ್ಗೆ ಗಂಟೆ 10.00ಕ್ಕೆ ನೇಮೊತ್ಸವವು ಜರಗಳಿರುವುದು, ಮಧ್ಯಾಹ್ನ ಗಂಟೆ 1.00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಕೆ. ಸುಮತಿ ಮನೋಹರ ಶೆಟ್ಟಿ ಹಾಗೂ ವಿಟ್ಲ. ಹೊಸಮನೆಯ ಜೈನ ಕುಟುಂಬಸ್ಥರು ಹಾಗೂ ಅಧ್ಯಕ್ಷರು/ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಶ್ರೀ ಅರಸು ಮುಂಡಾಲತ್ತಾಯ ಸೇವಾ ಸಮಿತಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -