- Advertisement -
- Advertisement -
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.7ರಂದು ನಡೆದಿದೆ.
ಕಡಬ ತಾಲೂಕಿನ ಕಾಯಿಮಣ ಮುಂಡಾಲ ನಿವಾಸಿ ದಿವಾಕರ್ (36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಅನಾರೋಗ್ಯದಿಂದ ದಿವಾಕರ್ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ ಆನಂದ ಗೌಡ, ತಾಯಿ ಸುಂದರಿ, ಸಹೋದರ ಚಂದ್ರಶೇಖರ, ಸಹೋದರಿ ಸೌಮ್ಯರವರನ್ನು ಅಗಲಿದ್ದಾರೆ.
- Advertisement -