Saturday, May 18, 2024
spot_imgspot_img
spot_imgspot_img

ಪ್ರಿಯತಮೆ ತಾಯಿ ಮತ್ತು ಸಹೋದರನಿಗೆ ಬೆಂಕಿ ಹಚ್ಚಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ..!

- Advertisement -G L Acharya panikkar
- Advertisement -

25 ವರ್ಷದ ಯುವಕನೊಬ್ಬ ತನ್ನ ಪ್ರಿಯತಮೆ ತಾಯಿ ಮತ್ತು ಸಹೋದರನಿಗೆ ಬೆಂಕಿ ಹಚ್ಚಿ ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ.

ಮೂವರು ಮೃತರನ್ನು 45 ವರ್ಷದ​ ಭೋಂಡೆ, 20 ವರ್ಷದ ಪ್ರಣಯ್​ ಸುರೇಶ್​ ರಾವ್​ ಭೋಂಡೆ ಹಾಗೂ ಆರೋಪಿ ಆಶಿಶ್​ ಠಾಕ್ರೆ ಎಂದು ಗುರುತಿಸಲಾಗಿದೆ.

ಆರೋಪಿಯು ತನ್ನ ಗೆಳತಿಯೊಂದಿಗೆ ಕಳೆದ ಮೂರು ವರ್ಷಗಳಿಂದ ವಾಸಿಸುತ್ತಿದ್ದ ಎನ್ನಲಾಗಿದೆ. ಆದರೆ ಕೆಲವು ವಿಷಯಗಳಿಗಾಗಿ ಜಗಳವಾಡಿದ ನಂತರ ಕೆಲವು ತಿಂಗಳ ಹಿಂದೆ ಇಬ್ಬರೂ ಬೇರ್ಪಟ್ಟಿದ್ದರು. ಇದೇ ಜಗಳದ ಪರಿಣಾಮವಾಗಿ ಆಶಿಶ್​ ಗೆಳತಿಯ ತಾಯಿ ಹಾಗೂ ಸಹೋದರನಿಗೆ ಬೆಂಕಿ ಹಚ್ಚಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಪೊಲೀಸರು ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು, ಈಗ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!