- Advertisement -
- Advertisement -
ಕೊಪ್ಪಳ : ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ 6 ಜನ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಕಲಕೇರಿ ಬಳಿ ನಡೆದಿದೆ.
ಮೃತಪಟ್ಟವರು ವಿಜಯಪುರ ಮೂಲದವರು ಎಂದು ಗೊತ್ತಾಗಿದೆ. ತಮಿಳುನಾಡಿನ ಲಾರಿ ಗುಜರಾತ್ ಕಡೆಗೆ ತೆರಳುತ್ತಿತ್ತು, ಟಾಟಾ ಇಂಡಿಕಾ ಕಾರು ವಿಜಯಪುರದಿಂದ ಬೆಂಗಳೂರು ಕಡೆಗೆ ತೆರಳುವಾಗ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿಯ ಕೆಳಭಾಗದ ಒಳಗಡೆ ನುಗ್ಗಿದೆ.
ಮೃತರು ರಾಚಪ್ಪ ಬನಸೋಡೆ, ರಾಘವೇಂದ್ರ ಕಾಂಬಳೆ, ಅಕ್ಷಯ ಶಿವಶರಣ, ಜಯಶ್ರೀ ಕಾಂಬಳೆ, ರಾಕಿ, ರಶ್ಮಿಕಾ ಎನ್ನಲಾಗಿದೆ. ಕಾರಿನ ಒಳಗೆ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಕ್ರೇನ್ ಮೂಲಕ ಹೊರ ತೆಗೆದು ಪಟ್ಟಣದ ಆಸ್ಪತ್ರೆಗೆ ಸಾಗಿಸಲಾಗಿದೆ.
- Advertisement -