ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಟಿಂಕು ಯಾದವ್ ಎಂಬಾತ 2.5 ಲಕ್ಷ ರೂಪಾಯಿ ಸಾಲ ಮಾಡಿ ಪತ್ನಿಯನ್ನು ನರ್ಸಿಂಗ್ ಕೋರ್ಸ್ ಮಾಡಿಸಿದ್ದು ಬಳಿಕ ಆತನಿಗೆ ದ್ರೋಹ ಬಗೆದು ಪ್ರಿಯಕರನೊಂದಿಗೆ ಓಡಿ ಹೋದ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಗೊಡ್ಡಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾಥೌನ್ ಗ್ರಾಮದ ನಿವಾಸಿ ಟಿಂಕು ಯಾದವ್ ಅವರು ನಗರದ ಬಧೌನಾ ಪ್ರದೇಶದ ನಿವಾಸಿ ಪ್ರಿಯಾ ಕುಮಾರಿ ಎಂಬಾಕೆಯನ್ನ ವಿವಾಹವಾಗಿದ್ದರು. ಮದುವೆಯ ನಂತರ ಹೆಂಡತಿ ಮುಂದೆ ಓದಲು ಬಯಸಿದ್ದಳು, ಅಲ್ಲದೆ ಆಕೆ ಉತ್ತಮ ವಿದ್ಯಾರ್ಥಿನಿಯಾಗಿದ್ದರಿಂದ, ಆರ್ಥಿಕ ಸಂಕಷ್ಟದ ನಡುವೆಯೂ, ಟಿಂಕು ತಮ್ಮ ಭವಿಷ್ಯವು ಸುಧಾರಿಸುತ್ತದೆ ಎಂದು ಯೋಚಿಸಿ ಆಕೆಗೆ ನರ್ಸಿಂಗ್ ಕೋರ್ಸ್ ಮಾಡಿಸಿದ್ದ. ಮದುವೆಯಾಗಿ ಒಂದೂವರೆ ವರ್ಷಗಳ ನಂತರ ಟಿಂಕುವಿನ ಪತ್ನಿ ನೆರೆಮನೆಯ ದಿಲ್ಖುಷ್ ರಾವುತ್ ಎಂಬಾತನ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಪ್ರೀತಿ ಚಿಗುರೊಡೆದು ಕೋರ್ಸ್ ಮುಗಿದ ಕೂಡಲೇ ಟಿಂಕುವಿಗೆ ಕೈ ಕೊಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ.
ಸಾಲ ಮಾಡಿ ಪತ್ನಿಯನ್ನು ನರ್ಸಿಂಗ್ ಕಾಲೇಜಿಗೆ ಸೇರಿಸಿ ಎಎನ್ಎಂ ಪದವಿ ಪಡೆಯಲು ನೆರವಾಗಿದ್ದೆ. ಹಗಲಿರುಳು ಕಷ್ಟಪಟ್ಟು ಕಾಲೇಜ್ ಫೀಜ್ ಕಟ್ಟುತ್ತಿದ್ದೆ. ಆದರೆ ಒಂದು ದಿನ ಪತ್ನಿ ನೆರಮನೆಯ ಯುವಕನೊಂದಿಗೆ ದೆಹಲಿಗೆ ಓಡಿ ಹೋಗಿದ್ದಾಳೆ. ಸೆಪ್ಟೆಂಬರ್ 17ರಂದು ಕಾಲೇಜು ರಜೆ ಇದ್ದಾಗ ಪತ್ನಿ ಪ್ರಿಯಾಕುಮಾರಿ ತನ್ನ ಪ್ರಿಯಕರನೊಂದಿಗೆ ದೆಹಲಿಗೆ ಓಡಿ ಹೋಗಿ ಅಲ್ಲಿ ಕೋರ್ಟ್ನಲ್ಲಿ ಮದುವೆ ಮಾಡಿಕೊಂಡು, ಮದುವೆಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾಳೆ. ಪತ್ನಿಯ ದಾಂಪತ್ಯ ದ್ರೋಹದಿಂದ ಮನನೊಂದ ಟಿಂಕು ನಗರ ಪೊಲೀಸ್ ಠಾಣೆಗೆ ತೆರಳಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.