Saturday, April 27, 2024
spot_imgspot_img
spot_imgspot_img

ರೈಲಿಗೆ ಸಿಲುಕಿ ಯುವಕ ಮೃತ್ಯು..!

- Advertisement -G L Acharya panikkar
- Advertisement -

ಪತ್ನಿಯೊಂದಿಗೆ ವೀಡಿಯೊ ಕಾಲ್ ನಲ್ಲಿ ಮಾತನಾಡುತ್ತಿದ್ದ ಪತಿಯು ರೈಲು ಬರುವುದನ್ನು ಗಮನಿಸದೆ ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಮೈಸೂರು ನಡೆದಿದೆ.

ಮೃತಪಟ್ಟ ಯುವಕ ಬಿಹಾರ ಮೂಲದ ಮನು ಕುಮಾ‌ರ್(27) ಎಂದು ಗುರುತಿಸಲಾಗಿದೆ.

ಕೊಡ್ಡಕವಲಂದೆಯಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಮನುಕುಮಾರ್ ವೀಡಿಯೊ ಕಾಲ್ ವೇಳೆ ರೈಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ರೈಲು ಹಳಿ ಪಕ್ಕದಲ್ಲಿ ಮನು ಮಾತನಾಡುವಾಗ ಅವಘಡ ನಡೆದಿದ್ದು, ಚಾಮರಾಜನಗರ ಕಡೆಯಿಂದ ರೈಲು ಮೈಸೂರಿಗೆ ಬರುತ್ತಿತ್ತು. ಘಟನಾ ಸ್ಥಳಕ್ಕೆ ನಂಜನಗೂಡು ರೈಲ್ವೆ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ನಂಜನಗೂಡು ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಶವ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!