Sunday, May 12, 2024
spot_imgspot_img
spot_imgspot_img

ಬಾಯ್‌ಫ್ರೆಂಡ್‌ಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಯುವತಿ..!

- Advertisement -G L Acharya panikkar
- Advertisement -

ಭಾರತೀಯನ ಪ್ರೀತಿಗೆ ಬಿದ್ದ ಯುವತಿಯೊಬ್ಬಳು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದಾಳೆ. ರುಮಾ ಮರಿಯಮ್ ಎಂಬಾಕೆ ಒಡಿಶಾದ ಬಾಲಸೋರ್​​​​ ಜಿಲ್ಲೆಯ ನಿವಾಸಿಯಾದ ಬೀರೇಂದ್ರ ಪ್ರತಾಪ್​ ಎಂಬಾತನನ್ನು ಆರು ವರ್ಷದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡರು. ಕ್ರಮೇಣ ಇವರ ಪರಿಚಯ ಗೆಳೆತನಕ್ಕೆ ಮರಳಿತು. ಗೆಳತನವು ಪ್ರೀತಿಗೆ ತಿರುಗಿತು.

ಬೀರೇಂದ್ರ ಪ್ರತಾಪ್ ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದ. ಆಕೆಯನ್ನು ಕಾಣಲು ಬಾಂಗ್ಲಾದೇಶಕ್ಕೂ ಹೋಗಿದ್ದಾನೆ. ಆಕೆಯನ್ನು ಭೇಟಿಯಾಗಿದ್ದಲ್ಲದೆ ದೈಹಿಕ ಸಂಬಂಧ ಕೂಡ ನಡೆಸಿದ್ದಾನೆ ಎಂದು ರುಮಾ ಹೇಳಿದ್ದಾಳೆ. ಕೊನೆಗೆ ರುಮಾ ತನ್ನ ಪ್ರಿಯಕರ ಬಳಿ ಮದುವೆಯಾಗಲು ಕೇಳುತ್ತಾಳೆ. ಇಸ್ಲಾಂಮಿಕ್​​ ವಿಧಿಗಳ ಪ್ರಕಾರ ವಿವಾಹವಾಗೋಣ ಎಂದು ಒತ್ತಾಯಿಸಿದಾಗ ಆತ ನಿರಾಕರಿಸಿದ್ದಾನೆ. ಬಳಿಕ ಆತ ಬಾಂಗ್ಲಾದಿಂದ ಒಡಿಶಾಗೆ ಹಿಂತಿರುಗಿದ್ದಾನೆ.

ಆದರೆ ಆತನ ನೆನಪಲ್ಲೇ ಉಳಿದುಕೊಂಡಿದ್ದ ರುಮಾ ಇದೀಗ ಪ್ರಿಯಕರನ ಬಳಿಗೆ ಓಡೋಡಿ ಬಂದಿದ್ದಾಳೆ. ಬಾಲಸೋರ್​ ತಲುಪಿದ್ದಾಳೆ. ಮಾತ್ರವಲ್ಲದೆ, ಬೀರೇಂದ್ರ ಪ್ರತಾಪ್ ಮನೆಗೆ ಹೋಗಿದ್ದಾಳೆ. ಆದರೆ ಪ್ರಿಯಕರನ ಮನೆಯವರು ಆಕೆಯನ್ನು ಮನೆಯಿಂದ ಹೊರಹೋಗುವಂತೆ ಹೇಳಿದ್ದಾರೆ.

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಬೀರೇಂದ್ರ ಪ್ರತಾಪ್​ಗೆ ಇನ್ನೊಂದು ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ರುಮಾ ಮಾತ್ರ ಆತನನ್ನು ಮದುವೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಆತನ ಜೊತೆಗೆ ತೆಗೆಸಿಕೊಂಡ ಫೋಟೋ, ವಿಡಿಯೋಗಳನ್ನು ಹೊಂದಿದ್ದಾಳೆ. ಮಾತ್ರವಲ್ಲದೆ, ತನಗೆ ನ್ಯಾಯ ಬೇಕೆಂದು ಪೊಲೀಸ್​ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾಳೆ.

- Advertisement -

Related news

error: Content is protected !!