- Advertisement -
- Advertisement -
ಹಾವು ಕಚ್ಚಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೇವರಗುಡ್ಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅ.29 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಭಿಲಾಷ್ (30) ಮೃತ ವ್ಯಕ್ತಿ. ಈತ ಸಂಜೆ ಏಳು ಗಂಟೆ ಸಮಯದಲ್ಲಿ ನೀರು ಹಾಯಿಸಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಗನನ್ನು ಕಳೆದುಕೊಂಡು ತಾಯಿಯ ಗೋಳಾಟ ಮುಗಿಲುಮುಟ್ಟಿದೆ.
ಅಭಿಲಾಷ್ ಮೃತಪಟ್ಟ ಬಳಿಕ ಆತನ ಮೊಬೈಲ್ನ್ನು ಸ್ನೇಹಿತರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಭಿಲಾಷ್ ಮೊಬೈಲ್ನಲ್ಲಿ ನಾಗರ ಹಾವಿನ ವೀಡಿಯೋ ಪತ್ತೆಯಾಗಿದೆ. ಪೈಪ್ನಿಂದ ನಾಗರಹಾವನ್ನು ಕೆಣಕಿರುವ ದೃಶ್ಯವನ್ನು ಅಭಿಲಾಷ್ ತನ್ನ ಮೊಬೈಲ್ನಲ್ಲಿಯೇ ಸೆರೆ ಹಿಡಿದಿದ್ದಾನೆ. ಪೈಪ್ನಿಂದ ಕೆಣಕುತ್ತಿದ್ದಂತೆ ಹೆಡೆ ಹೆತ್ತಿ ಬುಸುಗುಟ್ಟಿರುವ ನಾಗರಹಾವಿನ ವಿಡಿಯೋ ಇದೀಗ ವೈರಲ್ ಆಗಿದೆ. ಇನ್ನು ಈ ಘಟನೆ ಬಳಿಕ ಹಾವು ಕಚ್ಚಿ ಮೃತಪಟ್ಟಿದ್ದಾನೆ. ತನಗೆ ಹಿಂಸೆ ನೀಡಿದ ಅಭಿಲಾಷ್ನನ್ನು ಅದೇ ಹಾವು ಕಚ್ಚಿ ಸಾಯಿಸಿರುವ ಬಗ್ಗೆ ಅನುಮಾನ ಮೂಡಿದೆ.
- Advertisement -