Saturday, April 27, 2024
spot_imgspot_img
spot_imgspot_img

ಬೈಕ್- ಕಾರು ಡಿಕ್ಕಿ: ಸವಾರ ಮೃತ್ಯು.ಚಾಲಕ ಕಾರು ಸಹಿತ ಪರಾರಿ

- Advertisement -G L Acharya panikkar
- Advertisement -

ಉಪ್ಪಿನಂಗಡಿ: ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಎಚ್ ಐ ಎಂ ಹಾಲ್ ಮುಂಭಾಗ ಸಂಭವಿಸಿದೆ.


ಕಲ್ಲೇರಿ ಸಮೀಪದ ಬೇಂಗಿಲ – ತುಂಬೆತ್ತಡ್ಕ ನಿವಾಸಿ ಆರಿಫ್( 19) ಮೃತಪಟ್ಟ ಬೈಕ್ ಸವಾರ. ಈತ ಉಪ್ಪಿನಂಗಡಿ ಕಡೆಯಿಂದ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಆಲ್ಟೋ ಕಾರು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಆರೀಫ್ ಉಪ್ಪಿನಂಗಡಿಯ ಸಿಟಿ ಡ್ರೆಸ್ ಶಾಫ್ ನ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.
ಕಾರು ಸ್ಥಳದಿಂದ ಪರಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!