Sunday, May 19, 2024
spot_imgspot_img
spot_imgspot_img

ಅಳಿಕೆ: (ಮೇ.11) ಶ್ರೀ ದಿವ್ಯಜ್ಯೋತಿ ಮಿತ್ರವೃಂದ( ರಿ.) ಎರುಂಬು ದಿ| ರಾಮಯ್ಯ ಬಲ್ಲಾಳ್, ಎರುಂಬು ಇವರ ಸ್ಮರಣಾರ್ಥ ಕಥೆ ಎಡ್ಡೆಂಡು ನಾಟಕ

- Advertisement -G L Acharya panikkar
- Advertisement -

ಅಳಿಕೆ: ಶ್ರೀ ದಿವ್ಯಜ್ಯೋತಿ ಮಿತ್ರವೃಂದ( ರಿ.) ಎರುಂಬು ದಿ| ರಾಮಯ್ಯ ಬಲ್ಲಾಳ್, ಎರುಂಬು ಇವರ ಸ್ಮರಣಾರ್ಥ ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ಸಾರಥ್ಯದ ಕಲಾ ತೇಜಸ್ವಿ ಜೆ.ಪಿ. ತೂಮಿನಾಡು ರಚನೆ – ನಿರ್ದೇಶನ ತುಳುವೆ ಸೌರಭ ಪ್ರಕಾಶ್ ಕೆ. ತೂಮಿನಾಡು ಅಭಿನಯದ ಗಣೇಶ್ ಕೊಡಕ್ಕಲ್‌ ಸಂಗೀತದ ಕಥೆ ಎಡ್ಡೆಂಡು ಎಂಬ ತುಳು ಹಾಸ್ಯಮಯ ನಾಟಕ ಮೇ.11 ನೇ ಶನಿವಾರ ಸಂಜೆ 6:30ಕ್ಕೆ ಅಳಿಕೆ ಶ್ರೀ ಸತ್ಯಸಾಯಿ ವಿಹಾರದಲ್ಲಿ ನಡೆಯಲಿದೆ.

ಸಂಜೆ 6:30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ ಕಾರ್ಯದರ್ಶಿ ಚಂದ್ರಶೇಖರ ಭಟ್‌ ,ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಆರ್ಥೋಪೆಡಿಕ್ಸ್ ವಿಭಾಗ ಡಾ. ವಿಕ್ರಮ್ ಶೆಟ್ಟಿ ಅದ್ಯಕ್ಷತೆ ವಹಿಸಲಿದ್ದಾರೆ. ದೇರಳಕಟ್ಟೆ ಕೆ.ಎಸ್‌ ಮೆಡಿಕಲ್‌ ಅಕಾಡೆಮಿ, ಭಾಗವತರು ಮತ್ತು ಸಂಸ್ಥಾಪಕರು ಪಟ್ಲ ಪೌಂಡೇಶನ್ ಟ್ರಸ್ಟ್ ಮಂಗಳೂರು ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ಶ್ರೀ ಕಲಾ ಬಂಧು ಗುಬ್ಯ ಶ್ರೀಧರ ಕೆ ಶೆಟ್ಟಿ ಮೇಗಿನಗುತ್ತು, ಉದ್ಯಮಿಗಳು ಸತೀಶ್ ಆಳ್ವ ಇರಾ ಬಾಳಿಕೆ, ಉದ್ಯಮಿಗಳು ಮತ್ತು ಅಧ್ಯಕ್ಷರು ಜೇಸಿಐ ವಿಟ್ಲ ಸಂತೋಷ್ ಶೆಟ್ಟಿ ಪೆಲತಡ್ಕ, ಅಧ್ಯಕ್ಷರು ಗ್ರಾಮ ಪಂಚಾಯತ್‌ ಅಳಿಕೆ ಪದ್ಮನಾಭ ಪೂಜಾರಿ ಸಣ್ಣಗುತ್ತು, ಉದ್ಯಮಿ ಹಾಗೂ ಸಮಾಜ ಸೇವಕರು ದೇವದಾಸ್ ಅಡ್ಯನಡ್ಕ, ಪ್ರಧಾನ ಅರ್ಚಕರು ವಿಷ್ಣುಮಂಗಲ ದೇವಸ್ಥಾನ ಎರುಂಬು ಬಾಲಕೃಷ್ಣ ಕಾರಂತ ಎರುಂಬು, ಮುಖ್ಯ ಪ್ರಬಂಧಕರು, ಕರ್ನಾಟಕ ಬ್ಯಾಂಕ್, ಪ್ರಧಾನ ಕಛೇರಿ ಮಂಗಳೂರು ಜಗದೀಶ ಬಲ್ಲಾಲ್ ಜಿ. ಮುಖ್ಯ ಅತಿಥಿಗಳಾಗಿ ಬಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಂಚಾರಿ ನಿಯಂತ್ರಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಿ.ಸಿ.ರೋಡ್ ಘಟಕ ರಮೇಶ್ ಬಂಗೇರ ಬೂಡ್ಟು. ಖ್ಯಾತ ಕೃಷಿಕರು ಮತ್ತು ಹೈನುಗಾರಿಕೆ ಜಗತ್ಶಾಂತಪಾಲ, ಸಾಮಾಜಿಕ ಕಾರ್ಯಕರ್ತರು ಕಾನ ಈಶ್ವರ ಭಟ್ ಸನ್ಮಾನ ಸ್ವೀಕರಿಸಲಿದ್ದಾರೆ.

- Advertisement -

Related news

error: Content is protected !!