ಹಾಡಹಗಲೇ ವ್ಯಕ್ತಿ ಹಾಗೂ ಅವರ ಇಬ್ಬರು ಪುತ್ರಿಯರನ್ನು ಅಪಹರಿಸಲು ಯತ್ನಿಸಿದರು. ಆದ್ರೆ, ಕಾರು ಅಪಘಾತಕ್ಕೀಡಾದ ಪರಿಣಾಮ ಅಪಹರಣಕಾರರು ಎಸ್ಕೇಪ್ ಆದ ಘಟನೆ ದೆಹಲಿ ಸಮೀಪದ ಗೌತಮ್ ಬುಧ್ ನಗರದಲ್ಲಿ ನಡೆದಿದೆ.
ಸುಭಾಷ್ ಕಶ್ಯಪ್ ಎಂಬವರು ತನ್ನ ಇಬ್ಬರು ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅಪಹರಿಸಿದ್ದಾರೆ. ಕಶ್ಯಪ್ ಅವರು ಬಿಳಿ ಬ್ರಿಜಾ ಎಸ್ಯುವಿಯನ್ನು ಚಲಾಯಿಸುತ್ತಿರುವಾಗ ಸೂರಜ್ಪುರ ಮುಖ್ಯ ಮಾರುಕಟ್ಟೆಯಲ್ಲಿ ಅವರನ್ನು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಕಿಡಿಗೇಡಿಗಳು ಕಶ್ಯಪ್ ಅವರ ಸ್ಕಾರ್ಪಿಯೊ ಎಸ್ಯುವಿಯನ್ನು ಹತ್ತಿ ತಂದೆ ಮತ್ತು ಮಕ್ಕಳನ್ನು ಬಲವಂತವಾಗಿ ಒತ್ತೆಯಾಳಾಗಿಸಿಕೊಂಡಿದ್ದಾರೆ.
ಕಶ್ಯಪ್ ಅವರನ್ನು ಥಳಿಸಿದ ದುಷ್ಕರ್ಮಿಗಳು ಕಾರನ್ನು ತಮಗೆ ಬೇಕಾದ ಕಡೆಗೆ ಓಡಿಸಲು ಪ್ರಯತ್ನಿಸಿದ್ದಾರೆ. ಸ್ವಲ್ಪ ಮುಂದೆ ಕಾರು ಹೋಗುತ್ತಿದ್ದಂತೆ ಕಸದ ತೊಟ್ಟಿಗೆ ಡಿಕ್ಕಿ ಹೊಡೆದಿದೆ. ಈ ಪ್ರದೇಶವು ಜನಸಂದಣಿಯಿಂದ ಕೂಡಿದ ಮಾರುಕಟ್ಟೆಯಾದ್ದರಿಂದ ಜನಸಂದಣಿ ಹೆಚ್ಚಿತ್ತು. ಈ ವೇಳೆ ಅಪಹರಣಕಾರರು ಕಾರಿನಿಂದ ಇಳಿದು ಓಡಿದ್ದಾರೆ. ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ದುಷ್ಕರ್ಮಿಗಳು ಪರಾರಿಯಾಗುತ್ತಿರುವ ದೃಶ್ಯ ಸೆರೆಯಾಗಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಶ್ಯಪ್ ಅವರು ನಾಲ್ವರು ಪುರುಷರಲ್ಲಿ ಇಬ್ಬರನ್ನು ತಿಳಿದಿರುವುದಾಗಿ ಹೇಳಿದ್ದಾರೆ. ರೋಹಿತ್ ಮತ್ತು ಆಕಾಶ್ ಅವರೊಂದಿಗೆ ದೀರ್ಘಕಾಲದ ದ್ವೇಷವಿದ್ದು, ಎರಡು ತಿಂಗಳ ಹಿಂದೆ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.