Monday, April 29, 2024
spot_imgspot_img
spot_imgspot_img

ಕಾರು ಲಾರಿಗಳ ಭೀಕರ ಅಪಘಾತ -7 ಜನ ಸ್ಥಳದಲ್ಲೇ ಸಾವು

- Advertisement -G L Acharya panikkar
- Advertisement -

ಸ್ಟೇರಿಂಗ್ ವೀಲ್ ತುಂಡಾಗಿ ಟ್ರಕ್ ಕಾರೊಂದಕ್ಕೆ ಡಿಕ್ಕಿ ಹೊಡೆದು, ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಒಂದು ಅದೇ ಕಾರಿಗೆ ಡಿಕ್ಕಿ ಹೊಡೆದ ಘಟನೆ ಹೊಸಪೇಟೆ ಸಮೀಪದ ಗುಂಡಾ ಅರಣ್ಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.

ಹೊಸಪೇಟೆ ಕಡೆಯಿಂದ ಚಿತ್ರದುರ್ಗ ಕಡೆಗೆ ತೆರಳುತ್ತಿದ್ದ ಟಕ್ಕ್‌ನ ಸ್ಟೇರಿಂಗ್ ವೀಲ್ ತುಂಡಾಗಿ ಅದು ರಸ್ತೆ ವಿಭಜಕ ದಾಟಿಕೊಂಡು ಇನ್ನೊಂದು ಬದಿಯ ರಸ್ತೆಗೆ ನುಗ್ಗಿತ್ತು. ಅದೇ ವೇಳೆ ಹರಪನಹಳ್ಳಿ ಕಡೆಯಿಂದ ಹೊಸಪೇಟೆಯತ್ತ ಮಹೇಂದ್ರ ಎಸ್‌ಯುವಿ 300 ವಾಹನ ಬರುತ್ತಿತ್ತು. ಟ್ರಕ್ ಈ ವಾಹನಕ್ಕೆ ಗುದ್ದಿ ಮತ್ತೆ ಮುಂದಕ್ಕೆ ಹೋಗಿ ಗುಂಡಿಗೆ ಮಗುಚಿ ಬಿದ್ದಿದೆ. ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್ ಎಸ್‌ಯುವಿಗೆ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದ ಎಲ್ಲಾ ಏಳು ಮಂದಿ ಮೃತಪಟ್ಟಿದ್ದಾರೆ.

ಮೃತರು ಹೊಸಪೇಟೆಯ ಉಕ್ಕಡಕೇರಿಯವರಾಗಿದ್ದು ಮಗುವಿನ ಕೂದಲು ತೆಗೆಸುವ ಶಾಸ್ತ್ರ ಮಾಡಿಸುವ ಸಲುವಾಗಿ ಕುಟುಂಬ ಸಮೇತ ಹರಪನಹಳ್ಳಿ ತಾಲ್ಲೂಕಿನ ಕೂಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ವಾಪಸ್‌ ಬರುತ್ತಿದ್ದರು. ಮೃತಪಟ್ಟವರಲ್ಲಿ ಮೂವರು ಪುರುಷರು, ಮೂವರು ಮಹಿಳೆಯರು ಹಾಗೂ 5 ವರ್ಷದ ಹೆಣ್ಣು ಮಗು ಸೇರಿದೆ. ಮೃತರನ್ನು ಕೆಂಚವ್ವ (60), ಭಾಗ್ಯಮ್ಮ (32), ಗೋಣಿಬಸಪ್ಪ (55), ಗಿರಿಜಾ (45), ಭೀಮಲಿಂಗಪ್ಪ (60), ಅನಿಲ್ (28) ಮತ್ತು ಈವನ್ (8) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಎರಡೂ ಲಾರಿಗಳ ಚಾಲಕರಿಗೆ ಗಾಯವಾಗಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!