ವಿಟ್ಲ:- ಎಂ.ಕೆ.ಪರ್ನಿಚರ್ಸ್ & ಇಂಟೀರಿಯರ್ ನ ನೂತನ ಶೋರೂಂ ಸೆಪ್ಟೆಂಬರ್14ರಂದು ಬೆಳಿಗ್ಗೆ 10:30 ಕ್ಕೆ ಅಳಕೆಮಜಲು ಜುಮ್ಮಾ ಮಸೀದಿ ಕಟ್ಟಡ ದಲ್ಲಿ ಶುಭಾರಂಭಗೊಂಡಿತು.
ಅಸಯ್ಯದ್ ಕೆ.ಎಸ್.ಜಾಫರ್ ಸಾದಿಕ್ ತಂಙಳ್ ಕುಂಬೋಳ್ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಭೇಟಿ ನೀಡಿ ಶುಭ ಹಾರೈಸಿದರು. ಜಾತ್ಯತೀತ ಜನತಾದಳದ ಜಿಲ್ಲಾದ್ಯಕ್ಷ ಬಿ.ಮಹಮ್ಮದ್ ಕುಂಞಿ ವಿಟ್ಲ, ಪುತ್ತೂರು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಎಸ್ಡಿಪಿಐ ಅಧ್ಯಕ್ಷ ಸಿದ್ದೀಕ್ ಪುತ್ತೂರು,ರಾಜರಾಮ್ ಶೆಟ್ಟಿ ಕೊಲ್ಪೆ ಗುತ್ತು,ಸೋಮ್ ಶೇಖರ್ ಶೆಟ್ಟಿ ಅಳಕೆ ಮಜಲು,ಸುಧೀರ್ ಕುಮಾರ್ ಶೆಟ್ಟಿ,ಶಾಖೀರ್ ಅಳಕೆಮಜಲು, ಕೊಲ್ಪೆ ಮತ್ತು ಅಳಕೆ ಮಜಲು ಮಸೀದಿಯ ಖತಿಭರು ಇನ್ನಿತರ ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಿ ಶುಭ ಹಾರೈಸಿದರು.
ಸಂಸ್ಥೆಯ ಮಾಲಕರಾದ ಅಬ್ದುಲ್ ಖಾದರ್ ಖನ್ಝ್ ಮತ್ತು ಮೊಯಿದು ಹಾಜಿ ಸೀತಾಂಗೋಳಿ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.ಎಲ್ಲಾ ತರದ ಕರ್ನಾಟಕ ಮತ್ತು ಕೇರಳ ರಾಜ್ಯದ ಅತ್ಯಾಧುನಿಕ ಶೈಲಿಯ ಫರ್ನಿಚರ್ ಗಳು ಈ ಮಳಿಗೆಯಲ್ಲಿ ಲಭ್ಯವಿರುತ್ತದೆ.