- Advertisement -
- Advertisement -
ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದು, ಇದೀಗ ಅವರಿಗೆ ಶುಭಾಶಯಗಳ ಸುರಿಮಳೆಗಳೇ ಹರಿದುಬರುತ್ತಿವೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಷ್ಟ್ರೀಯವಾದಿಗಳು, ಅಪ್ಪಟ ದೇಶ ಭಕ್ತರನ್ನು ಹೊಂದಿರುವ ಪಕ್ಷವೇ ಬಿಜೆಪಿ. ದೇಶ ಸೇವೆಯ ಗುರಿ ಹೊಂದಿರುವ ಪ್ರತಿ ದೇಶವಾಸಿಯೂ ಬಿಜೆಪಿಯನ್ನೇ ಬೆಂಬಲಿಸುತ್ತಾರೆ. ಅಣ್ಣಾಮಲೈ ಅವರನ್ನು ತುಂಬು ಹೃದಯದಿಂದ ನಮ್ಮ ಬಿಜೆಪಿ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ರಾಷ್ಟ್ರೀಯವಾದಿಗಳು, ಅಪ್ಪಟ ದೇಶ ಭಕ್ತರನ್ನು ಹೊಂದಿರುವ ಪಕ್ಷವೇ ಬಿಜೆಪಿ. ದೇಶ ಸೇವೆಯ ಗುರಿ ಹೊಂದಿರುವ ಪ್ರತಿ ದೇಶವಾಸಿಯೂ ಬಿಜೆಪಿಯನ್ನೇ ಬೆಂಬಲಿಸುತ್ತಾರೆ.
— Nalinkumar Kateel (@nalinkateel) August 25, 2020
ಶ್ರೀ @annamalai_k ಅವರನ್ನು ತುಂಬು ಹೃದಯದಿಂದ ನಮ್ಮ ಬಿಜೆಪಿ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇನೆ.
Welcome to BJP Family! #annamalai pic.twitter.com/4E3SVeWcWq
- Advertisement -