- Advertisement -
- Advertisement -
ಹೈದರಾಬಾದ್: ಮಹಿಳೆಯರ ಸುರಕ್ಷತೆ ಖಾತರಿಪಡಿಸಲು ತೆಲಂಗಾಣ ಸರ್ಕಾರ ಆರಂಭಿಸಿರುವ ಕಾರ್ಯಕ್ರಮಗಳಿಗೆ ನಟಿ ಅನುಷ್ಕಾ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಹೈದರಾಬಾದ್ ನಲ್ಲಿ ಮಹಿಳಾ ರಕ್ಷಣಾ ದಳದ ವಾರ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡಿಗರಾಗಿರುವ ಹೈದರಾಬಾದ್ ಪೊಲೀಸ್ ಕಮಿಷನರ್ ವಿ. ಸಿ. ಸಜ್ಜನರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇಬ್ಬರು ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಮಿಂಚಿದ್ದು ವಿಶೇಷವಾಗಿತ್ತು. ಎಡಿಜಿಪಿ ಸ್ವಾತಿ ಲಾಕ್ರಾ ಮತ್ತು ಡಿಸಿಪಿ ಅನಸೂಯ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
- Advertisement -