- Advertisement -
- Advertisement -
ಮಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ, ನಿರೂಪಕಿ ಅನುಶ್ರೀ ಪಣಂಬೂರು ಪೋಲಿಸ್ ಠಾಣೆಗೆ ಆಗಮಿಸಿದ್ದು, ಸಿಸಿಬಿ ಪೋಲಿಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಸಿಸಿಬಿ ವಿಚಾರಣೆಗೆ ಹಾಜರಾಗಲು ನಿನ್ನೆಯೇ ಮಂಗಳೂರು ತಲುಪಿದ್ದ ಅನುಶ್ರೀ ಅವರಿಗೆ ನಾಳೆ ವಿಚಾರಣೆಗೆ ಹಾಜರಾಗಿ ಎಂದು ಸಿಸಿಬಿ ಸೂಚಿಸಿತ್ತು, ಅದರಂತೆ ಇಂದು ಠಾಣೆಗೆ ಅವರು ಆಗಮಿಸುತ್ತಲೇ ಸಿಸಿಬಿ ಪೋಲಿಸರು ಅನುಶ್ರೀ ಅವರನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಿದ್ದಾರೆ. ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರೊಂದಿಗೆ ಡ್ರಗ್ಸ್ ಜಾಲದಲ್ಲಿ ಸಿಸಿಬಿ ವಶಕ್ಕೆ ಸಿಲುಕಿದ ಕುಖ್ಯಾತಿಗೆ ಅನುಶ್ರೀ ಪಾತ್ರರಾಗಿದ್ದಾರೆ. ವಿಚಾರಣೆಯ ನಂತರ ಅನುಶ್ರೀ ಅವರ ಬಂಧನವಾಗಲಿದೆಯೇ ಅಥವಾ ಬಿಟ್ಟು ಕಳುಹಿಸಲಿದ್ದಾರಾ ಎಂಬುದು ಕುತೂಹಲ ಕೆರಳಿಸಿದೆ.
- Advertisement -