Sunday, May 19, 2024
spot_imgspot_img
spot_imgspot_img

ವಿಟ್ಲ : ಅಕ್ರಮ ಮರಳು ಸಾಗಾಟ ಪ್ರಕರಣದ ಆರೋಪಿಯ ಬಂಧನ

- Advertisement -G L Acharya panikkar
- Advertisement -

ವಿಟ್ಲ :ವಿಟ್ಲ ಪೊಲೀಸ್ ಠಾಣೆಯ ಅಕ್ರ:126/2017 ಕಲಂ:379 r/w 34 IPC ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ, ಆರೋಪಿ ನರಿಂಗಾನ ಗ್ರಾಮ ಬಂಟ್ವಾಳ ನಿವಾಸಿ ಸಿದ್ದೀಕ್ ಕೆ.ಎಮ್‌(46) ಎಂಬಾತನನ್ನು, ಸೋಮವಾರ ರಾತ್ರಿ ವಿಟ್ಲ ಠಾಣಾ ASI ಜಯರಾಮ ಹಾಗೂ ಸಿಬ್ಬಂದಿಗಳಾದ ಪುನೀತ್, ಹೇಮರಾಜ್, ಆಶೋಕ್ ರವರುಗಳು ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ಕೆದಂಬಾಡಿ ಜಂಕ್ಷನ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆರೋಪಿಯು ತಪ್ಪು ಒಪ್ಪಿಕೊಂಡಿದ್ದು, ನ್ಯಾಯಾಲಯವು ರೂ. 11.000/- ದಂಡವನ್ನು ವಿಧಿಸಲಾಗಿದೆ.

ಸದ್ರಿ ಪ್ರಕರಣವು ಮರಳು ಸಾಗಾಟದ ಪ್ರಕರಣವಾಗಿದ್ದು, ಆರೋಪಿಯ ಬಗ್ಗೆ ಯಾವುದೇ ದಾಖಲೆ/ ಭಾವಚಿತ್ರ ಇಲ್ಲದೇ ಇದ್ದುದರಿಂದ ದಸ್ತಗಿರಿಗೆ ತೊಡಕಾಗಿದ್ದು, ಲಾರಿಯ ದಾಖಲಾತಿಯ ಬಗ್ಗೆ ASI ಜಯರಾಮರವರು ಜಿಲ್ಲೆಯ RTO ಕಚೇರಿಗಳಿಂದ ಮತ್ತು LIC ಕಚೇರಿಯಿಂದ ಆರೋಪಿಗೆ ಸಂಬಂಧ ಪಟ್ಟ ದಾಖಲಾತಿ ಮತ್ತು ಭಾವ ಚಿತ್ರವನ್ನು ಸಂಗ್ರಹಿಸಿ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿರುತ್ತಾರೆ.

- Advertisement -

Related news

error: Content is protected !!