Friday, May 3, 2024
spot_imgspot_img
spot_imgspot_img

ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಬಂಟ್ವಾಳದ ಸುವರ್ಣ ನಾಡು ಘಟಕದ ನೇತೃತ್ವದಲ್ಲಿ ಅಯೋಧ್ಯಾ ದೀಪ ಕಾರ್ಯಕ್ರಮ

- Advertisement -G L Acharya panikkar
- Advertisement -

ಅಯೋಧ್ಯಾ ಪ್ರಭು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಬಂಟ್ವಾಳದ ಸುವರ್ಣನಾಡು ಶ್ರೀ ದುರ್ಗಾಂಬಿಕಾ ಸಿದ್ದೇಶ್ವರಿ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ಸುವರ್ಣ ನಾಡು ಘಟಕದ ನೇತೃತ್ವದಲ್ಲಿ ಅಯೋಧ್ಯಾ ದೀಪ ಕಾರ್ಯಕ್ರಮ ನಡೆಯಿತು.

ಆ ಪ್ರಯುಕ್ತ ರಾಮ ರಕ್ಷಾ ಧರ್ಮ ಶಿಕ್ಷಣಂ ಶ್ರಿ ದುರ್ಗಾಂಭಿಕಾ ಸಿದ್ದೇಶ್ವರಿ ಭಜನಾ ಮಂಡಳಿ ಮಕ್ಕಳಿಂದ ದೀಪಾರಾಧನೆ ಜೊತೆ ರಾಮ ರಕ್ಷಾ ಸ್ತೋತ್ರ ಪಾರಾಯಣ, ಮತ್ತು ಸಾರ್ವಜನಿಕರಿಂದ ರಾಮ ತಾರಕ ನಾಮ ಜಪ ನಡೆಯಿತು. ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇಶದ ಒಳಿತಿಗಾಗಿ ಪ್ರಾರ್ಥಿಸಲಾಯಿತು. ದೀಪಾರಾಧನೆಯನ್ನು ರಾಮ ರಕ್ಷಾ ಧರ್ಮ ಶಿಕ್ಷಣದ ಪ್ರಮುಖರಾದ ಮನೋಹರ್ ಕಲ್ಲಡ್ಕ ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯರುಗಳಾದ ಸಂತೋಷ್ ಸುವರ್ಣನಾಡು, ಮಿಥುನ್ ಕುರಿಯಾಳ, ಗಣೇಶ್ ಹಿಂದೂಪುರ, ವಿನ್ಯಾಸ ಸಂಸ್ಥೆಯ ಮಾಲಕರಾದ ಚಿಂತನ್ ವಿನ್ಯಾಸ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗುಣವತಿ ಸುವರ್ಣನಾಡು, ಸುರೇಶ್ ಸುವರ್ಣನಾಡು, ರಾಜೇಶ್ ಸುವರ್ಣನಾಡು ಹಾಗೂ ಸುವರ್ಣನಾಡಿನ ಹಿಂದೂ ಬಂಧುಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!