Friday, March 29, 2024
spot_imgspot_img
spot_imgspot_img

ತಾಯಿಯ ಅಂತ್ಯಕ್ರಿಯೆಯೂ ನಡೆದಿತ್ತು ಆದರೆ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ; ತಂದೆ ಮಗ ಇಬ್ಬರೂ ಜೈಲುಪಾಲು!!

- Advertisement -G L Acharya panikkar
- Advertisement -

ಬಾಗಲಕೋಟೆ: ವ್ಯಕ್ತಿಯೋರ್ವ ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ತಾಯಿಯ ಕೊಲೆಗೆ 14 ವರ್ಷದ ಬಾಲಕ ಸಾಥ್ ಕೊಟ್ಟಿದ್ದ. ಗಡಿಬಿಡಿಯಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಿ ಅಂತ್ಯಕ್ರಿಯೆಯನ್ನೂ ಮಾಡಿ ಮುಗಿಸಿದ್ದರು. ಆದ್ರೆ ಆ ಒಂದು ಅನಾಮಿಕ ಕಾಲ್ ಇದೀಗ ಇಬ್ಬರೂ ಜೈಲು ಸೇರುವಂತೆ ಮಾಡಿದೆ.

ಅಷ್ಟಕ್ಕೂ ಈ ಘಟನೆ ನಡೆದಿರೋದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ. ಮಹಾದೇವಿ ವಡ್ರಾಲ ( 40 ವರ್ಷ) ಎಂಬಾಕೆಯೇ ಕೊಲೆಯಾದ ದುರ್ದೈವಿ. ಹನುಮಂತ ವಡ್ರಾಲ ಹಾಗೂ 14 ವರ್ಷದ ಬಾಲಕನನ್ನು ಸಾವಳಗಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪತ್ನಿಯ ಶೀಲ ಶಂಕಿಸಿದ್ದ ಹನುಮಂತ ವಡ್ರಾಲ ರಾತ್ರಿಯ ವೇಳೆಯಲ್ಲಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ವೇಳೆಯಲ್ಲಿ ತಂದೆ ಕಾರ್ಯಕ್ಕೆ ಮಗ ಕೂಡ ಸಾಥ್ ಕೊಟ್ಟಿದ್ದಾನೆ. ಬೆಳಗಾಗುತ್ತಲೇ ಮಹಾದೇವಿ ವಡ್ರಾಲಳನ್ನು ಸುಟ್ಟು ಹಾಕಿದ್ದರು.

ಗಡಿಬಿಡಿಯಲ್ಲಿ ಅಂತ್ಯಕ್ರಿಯೆ ಮುಗಿಸಿರೋದು ಗ್ರಾಮಸ್ಥರಿಗೆ ಅನುಮಾನವನ್ನು ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ ವೇಳೆಯಲ್ಲಿ ಕೊಲೆಯ ರಹಸ್ಯ ಬಯಲಾಗಿದೆ. ಪೊಲೀಸರು ಇದೀಗ ಇಬ್ಬರನ್ನೂ ಬಂಧಿಸಿ ಸ್ಥಳ ಮಹಜರು ನಡೆಸಿದ್ದಾರೆ.

- Advertisement -

Related news

error: Content is protected !!