Friday, May 3, 2024
spot_imgspot_img
spot_imgspot_img

ಕಾರು ಹರಿದು ಪಾದಚಾರಿ ಮೃತ್ಯು..!

- Advertisement -G L Acharya panikkar
- Advertisement -

ಕಾರೊಂದು ಪಾದಚಾರಿಯ ಮೇಲೆ ಕಾರು ಹರಿದು ಮೃಪಟ್ಟಿರುವ ಘಟನೆ ವೈಟ್‌ ಫೀಲ್ಡ್ ಸಂಚಾರ ಠಾಣಾ ವ್ಯಾಪ್ತಿ ಬಳಿ ನಡೆದಿದೆ.

ನಲ್ಲೂರಹಳ್ಳಿ ನಿವಾಸಿ ಸಿದ್ದಲಿಂಗಯ್ಯ(77) ಮೃತ ವೃದ್ಧ ಎಂದು ತಿಳಿದು ಬಂದಿದೆ. ಕಾರಿನ ಡೋರ್ ತೆಗೆದ ಪರಿಣಾಮ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಅವರಿಗೆ ತಾಗಿ ಕೆಳಗೆ ಬಿದ್ದಾಗ ಅವರ ಮೇಲೆಯೇ ಹಿಂದಿನಿಂದ ಬಂದ ಕಾರು ಹರಿದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಮನೆ ಸಮೀಪದ ದೇವಾಲಯಕ್ಕೆ ತೆರಳಿ ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ.

ನಲ್ಲೂರಹಳ್ಳಿಯ ನ್ಯೂ ಟೆಂಪಲ್ ರಸ್ತೆಯಲ್ಲಿ ಮುಂದೆ ನಿಂತಿದ್ದ ಕಾರಿನ ಬಾಗಿಲನ್ನು ಏಕಾಏಕಿ ತೆಗೆದ ಪರಿಣಾಮ ಸಿದ್ದಲಿಂಗಯ್ಯ ಅವರಿಗೆ ತಗುಲಿ ರಸ್ತೆ ಮದ್ಯದಲ್ಲಿ ಬಿದ್ದಿದ್ದರು. ಹಿಂದಿನಿಂದ ಬಂದ ಮತ್ತೊಂದು ಕಾರು ಸಿದ್ದಲಿಂಗಯ್ಯ ಮೇಲೆ ಹರಿದು ದುರ್ಮರಣ ಹೊಂದಿದ್ದಾರೆ. ಈ ಕುರಿತು ವೈಟ್‌ಫೀಲ್ಡ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!