Friday, May 3, 2024
spot_imgspot_img
spot_imgspot_img

ಹಾಡಹಗಲೇ ನಡೆಯಿತು ರಕ್ತಪಾತ: ಫುಡ್ ಕಿಟ್ ಹಂಚುತ್ತಿದ್ದ ವೇಳೆ ಕಾರ್ಪೋರೇಟರ್ ಹತ್ಯೆ!!

- Advertisement -G L Acharya panikkar
- Advertisement -

ಬೆಂಗಳೂರು: ಹಾಡಹಗಲೇ ಮಾಜಿ ಕಾಪೋರೇಟರ್ ಅನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಅಂಜನಪ್ಪ ಗಾರ್ಡನ್ ನಲ್ಲಿ ನಡೆದಿದೆ. ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಅವರು ಇಂದು ಬೆಳಗ್ಗೆ ಫುಡ್ ಕಿಟ್ ಹಂಚುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಇಬ್ಬರು ದುಷ್ಕರ್ಮಿಗಳು ಮಾಜಿ ಕಾರ್ಪೋರೇಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಪೊಲೀಸರು ಇರುವಾಗಲೇ ರೇಖಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಕುತ್ತಿಗೆ, ತಲೆಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಕುತ್ತಿಗೆ, ತಲೆಗೆ ಗಂಭೀರ ಗಾಯವಾಗಿದೆ. ಪೊಲೀಸರು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.

2018 ರಲ್ಲಿ ಪತಿ ಕದಿರೇಶ್‌ನನ್ನು ಹತ್ಯೆ ಮಾಡಲಾಗಿತ್ತು. ಕೌಟುಂಬಿಕ ಕಲಹ ಇದಕ್ಕೆಲ್ಲಾ ಮೂಲ ಕಾರಣ ಎಂಬುವುದು ಪ್ರಥಮ ಮಾಹಿತಿಯಾಗಿದೆ.

- Advertisement -

Related news

error: Content is protected !!