Thursday, April 25, 2024
spot_imgspot_img
spot_imgspot_img

ಬಂಟ್ವಾಳ: ಜಾತ್ರೆಯಿಂದ ತಂಗಿಗೆ ಐಸ್ ಕ್ರೀಮ್ ತರಲಿಲ್ಲ ಅನ್ನೋ ಕಾರಣಕ್ಕೆ ಪೋಷಕರು ಬೈದರೆಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ!

- Advertisement -G L Acharya panikkar
- Advertisement -

ಬಂಟ್ವಾಳ: ಜಾತ್ರೆಯಿಂದ ಮನೆಗೆ ಬರುವಾಗ ತಡವಾದ ಕಾರಣಕ್ಕೆ, ಮಾತ್ರವಲ್ಲದೆ ತಂಗಿಗೆ ಐಸ್ ಕ್ರೀಮ್ ತರಲಿಲ್ಲ ಎಂದು ಪೋಷಕರು ಬೈದಿದ್ದು, ಮನನೊಂದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಾಳ್ತಿಲ ಗ್ರಾಮದ ಚೇರ್ಕಳದಲ್ಲಿ ನಡೆದಿದೆ.

ಶಂಭೂರು ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಹರ್ಷಿತ್(14) ಎಂಬಾತ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಜಾತ್ರೆಗೆ ತೆರಳಿದ್ದ ಹರ್ಷಿತ್ ಮನೆಗೆ ತಡವಾಗಿ ಬಂದಿದ್ದು, ಹಾಗೂ ತಂಗಿಗೆ ಐಸ್ ತರದೇ ಇದ್ದಿದ್ದಕ್ಕೂ ಪೋಷಕರು ಬೈದು ಬುದ್ದಿ ಮಾತು ಹೇಳಿದ್ದಾರೆ. ಇಷ್ಟಕ್ಕೆ ಬೇಸರಗೊಂಡ ಹರ್ಷಿತ್ ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಹರ್ಷಿತ್ ಈ ಹಿಂದೆಯೂ ಕೂಡ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಬಂಟ್ವಾಳ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!