- Advertisement -
- Advertisement -
ಮಂಗಳೂರು: ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಿಂದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಇಡ್ಯಾ ಪಶ್ಚಿಮ ವಾರ್ಡ್ ನಂ 7 ರ ಇಡ್ಯಾ ಕಾಳಪಯ್ಯ ಮನೆ ಬಳಿ ರೂ. 4.20ಲಕ್ಷ ವೆಚ್ಚದ ಚರಂಡಿ ನಿರ್ಮಾಣ ಮತ್ತು ಇಡ್ಯಾ ಕರಾವಳಿ ರಸ್ತೆ ಬಳಿ ರೂ. 4.28 ಲಕ್ಷ ವೆಚ್ಚದ ಇಂಟರ್ ಲಾಕ್ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ನಯನ ಆರ್. ಕೋಟ್ಯಾನ್, ವಲಯ ಆಯುಕ್ತರು ನಾಗರಾಜು ಆರ್ ಬಿ ಜೂನಿಯರ್ ಇಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ ಉತ್ತರ ಮಂಡಲದ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಗಂಗಾಧರ ಸನಿಲ್, ಕಾರ್ಯದರ್ಶಿ ರಾಘವೇಂದ್ರ ಶೆಣೈ,ಬಿಜೆಪಿ ಮುಖಂಡರಾದ ಜಯಂತ್ ಸಾಲ್ಯಾನ್,ಸಂದೇಶ್ ಇಡ್ಯಾ,,ದಿವೇಶ್ ಪೂಜಾರಿ,ಸುರೇಶ್ ಸಾಲ್ಯಾನ್, ಉದಯ ಆಳ್ವ, ಲಿಖಿತ್ ಕರ್ಕೇರ, ಧರ್ಮೇಂದ್ರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
- Advertisement -