Saturday, May 4, 2024
spot_imgspot_img
spot_imgspot_img

ಉದ್ಯಮಿ ಪುತ್ರನ ಬರ್ಬರ ಹತ್ಯೆ ಮಾಡಿ ಹಳ್ಳಕ್ಕೆ ಬಿಸಾಡಿದ ದುಷ್ಕರ್ಮಿಗಳು..!!

- Advertisement -G L Acharya panikkar
- Advertisement -
vtv vitla

ಉದ್ಯಮಿಯೊಬ್ಬರ ಪುತ್ರನನ್ನು ಬರ್ಬರವಾಗಿ ಹತ್ಯೆ ಮಾಡಿ ಹಳ್ಳಕ್ಕೆ ಬಿಸಾಡಿರುವ ಘಟನೆ ಮೈಸೂರಿನ ವಿಜಯನಗರ 1ನೇ ಹಂತದ ವಾಟರ್‌ ಟ್ಯಾಂಕ್‌ ಬಳಿ ನಡೆದಿದೆ.

ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸೆನ್‌ ಎಂಜಿನಿಯರಿಂಗ್‌ ವರ್ಕ್ಸ್ ಮಾಲೀಕ ಹಾಗೂ ವಿಜಯನಗರ 1ನೇ ಹಂತ ನಿವಾಸಿ ಕೆ.ಎಂ. ಚೆರಿಯನ್‌ ಅವರ ಪುತ್ರ ಕ್ರಿಸ್ಟೋ ಚೆರಿಯನ್‌(34) ಹತ್ಯೆಯಾದವರು. ಹತ್ಯೆ ಮಾಡಿದ ಬಳಿಕ ವಿಜಯನಗರ 1ನೇ ಹಂತದಲ್ಲಿರುವ ವಾಟರ್‌ ಟ್ಯಾಂಕ್‌ ಸಮೀಪದ ಹಳ್ಳದಲ್ಲಿ ಶವವನ್ನು ಬಿಸಾಡಲಾಗಿದೆ.

ಚೆರಿಯನ್‌ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಯಾರು, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸಾರ್ವಜನಿಕರು ಆ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ವೇಳೆ ಮೃತ ವ್ಯಕ್ತಿ ಕ್ರಿಸ್ಟೋ ಚೆರಿಯನ್‌ ಎಂಬುದು ಗೊತ್ತಾಗಿದೆ. ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!