Thursday, May 2, 2024
spot_imgspot_img
spot_imgspot_img

ಲಂಚ ಪಡೆಯುತ್ತಿದ್ದ ಬಿಬಿಎಂಪಿ ಎಆರ್‌ಒ ಲೋಕಾಯುಕ್ತ ಬಲೆಗೆ..!

- Advertisement -G L Acharya panikkar
- Advertisement -

ಬೆಂಗಳೂರು ಮಹಾನಗರ ಪಾಲಿಕೆಯ ಎಆರ್ ಒ ಅನ್ನು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಬಿಬಿಎಂಪಿ ಎಆರ್ ಒ ಚಂದ್ರ ಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು.

ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ಖಾತೆ ಮಾಡಿಕೊಡಲು 60,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಂದ್ರಪ್ಪ, ಮುಂಗಡವಾಗಿ 10,000 ರೂಪಾಯಿ ಪಡೆಯುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಬಳಿಕ ಚಂದ್ರಪ್ಪ ಅವರ ಬೆಂಗಳೂರಿನ ಕೆ.ಆರ್.ಪುರಂ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿ ಅವರು 5 ಲಕ್ಷ ರೂ. ನಗದು ಸೇರಿ ಅವರ ಹೆಸರಿನಲ್ಲಿದ್ದ ಫ್ಲ್ಯಾಟ್, ರಾಣೆಬೆನ್ನೂರು ತಾಲೂಕಿನ 6 ಎಕರೆ ಜಮೀನು ದಾಖಲೆ ಪತ್ರ, ಕೆ.ಆರ್. ಪುರಂ ಕಟ್ಟಡದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!